HomeLife Styleಮಧುಮೇಹಿಗಳಿಗೆ ಚಳಿಗಾಲ ತುಂಬಾ ರಿಸ್ಕ್! ರಾತ್ರಿ ಆದ್ರೆ ಸಾಕು ಈ ಕಷ್ಟ ತಪ್ಪಿದ್ದಲ್ಲ!

ಮಧುಮೇಹಿಗಳಿಗೆ ಚಳಿಗಾಲ ತುಂಬಾ ರಿಸ್ಕ್! ರಾತ್ರಿ ಆದ್ರೆ ಸಾಕು ಈ ಕಷ್ಟ ತಪ್ಪಿದ್ದಲ್ಲ!

For Dai;y Updates Join Our whatsapp Group

Spread the love

ಮಧುಮೇಹ ಎನ್ನುವುದು ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಎಷ್ಟೇ ಸಿಹಿ ಪ್ರಿಯರಾಗಿದ್ದರೂ ಮಧುಮೇಹ ಬಂದ ಬಳಿಕ ಇದನ್ನು ಕಡೆಗಣಿಸಲೇಬೇಕು. ಇಷ್ಟು ಮಾತ್ರವಲ್ಲದೆ, ಆಹಾರದಲ್ಲಿ ಕೂಡ ತುಂಬಾ ಜಾಗೃತೆ ವಹಿಸಿ, ನಿತ್ಯವೂ ವ್ಯಾಯಾಮ ಅಥವಾ ನಡಿಗೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗಿ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು.

ಇನ್ನೂ ಚಳಿಗಾಲ ಮಧುಮೇಹಿಗಳಿಗೆ ತುಂಬಾ ಕಷ್ಟ ಆಗಲಿದೆ. ಚುಮು-ಚುಮು ಚಳಿಗೆ ಸಕ್ಕರೆ ಕಾಯಿಲೆ ಇರುವವರಿಗೆ ರಾತ್ರಿ ಆದ್ರೆ ಸಾಕು ಪದೇ ಪದೇ ಮೂತ್ರ ವಿಸರ್ಜನೆ ಅನುಭವ ಉಂಟಾಗುತ್ತದೆ. ಈ ರೀತಿ ನಿದ್ರೆ ಬಿಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ಹೀಗಾಗಿ ಚಳಿಗಾಲದಲ್ಲಿ ಸಕ್ಕರೆ ಕಾಯಿಲೆಯ ನಿರ್ವಹಣೆ ಬಹಳ ಮುಖ್ಯ. ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗ ದಂತೆ ನೋಡಿಕೊಳ್ಳುವುದರ ಜೊತೆಗೆ ಆಹಾರ ಪದ್ಧತಿಯ ಕಡೆಗೂ ಗಮನಕೊಡಬೇಕು. ಈ ಟಿಪ್ಸ್ ಅನುಸರಿಸುವುದು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗಿದೆ.

ರಾತ್ರಿ ಹೊತ್ತು ಹೆಚ್ಚು ನೀರು ಕುಡಿಯಬೇಡಿ:-

ನೀವು ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತೀರಿ ಎನ್ನುವುದು ನಿಮ್ಮ ಮೂತ್ರ ವಿಸರ್ಜನೆಯ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಸಂಜೆ ಅಥವಾ ರಾತ್ರಿ ಮಲಗುವ ಸಮಯದಲ್ಲಿ ಸಾಧ್ಯವಾದಷ್ಟು ಕಡಿಮೆ ನೀರು ಕುಡಿಯಿರಿ. ಇದರಿಂದ ಆಗಾಗ ಬಾತ್ರೂಮಿಗೆ ಹೋಗುವ ಸಾಧ್ಯತೆ ತಪ್ಪುತ್ತದೆ.

ಶುಗರ್ ಲೆವೆಲ್ ಕಂಟ್ರೋಲ್ ಮಾಡಿಕೊಳ್ಳಿ:-

ನಿಮ್ಮ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿದ್ದರೆ ಅದು ಕೂಡ ನೀವು ಪದೇ ಪದೇ ಟಾಯ್ಲೆಟ್ ಗೆ ಹೋಗುವ ಹಾಗೆ ಮಾಡುತ್ತದೆ. ಹೀಗಾಗಿ ನಿಮ್ಮ ಬ್ಲಡ್ ಗ್ಲುಕೋಸ್ ಲೆವೆಲ್ ನಿಯಂತ್ರಣ ಮಾಡಿಕೊಳ್ಳಿ. ಸಮತೋಲನವಾದ ಆಹಾರ ಪದ್ಧತಿಯನ್ನು ಅನುಸರಿಸುವ ಜೊತೆಗೆ ನಿಯಮಿತ ವ್ಯಾಯಾಮ ಹಾಗೂ ಸರಿಯಾದ ಔಷಧಿಗಳನ್ನು ತೆಗೆದುಕೊಳ್ಳುವುದರ ಮೂಲಕ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಿಕೊಳ್ಳಬಹುದು.

ಸಮತೋಲನವಾದ ಆಹಾರ ಪದ್ಧತಿ ಅನುಸರಿಸಿ:

ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಸಕ್ಕರೆ ಕಾಯಿಲೆ ಸಂಬಂಧಿತ ಸಮಸ್ಯೆಗಳನ್ನು ಅಥವಾ ರೋಗ ಲಕ್ಷಣಗಳನ್ನು ನಿಯಂತ್ರಣ ಮಾಡಲು ಅನುಕೂಲವಾಗುತ್ತದೆ. ಕಡಿಮೆ ಕಾರ್ಬೋ ಹೈಡ್ರೇಟ್ ಮತ್ತು ಸಿಹಿ ಪ್ರಮಾಣ ಒಳಗೊಂಡಿರುವ ಆಹಾರಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡು ಪದೇಪದೇ ಮೂತ್ರ ವಿಸರ್ಜನೆ ಮಾಡುವ ಸಾಧ್ಯತೆಯನ್ನು ತಡೆಗಟ್ಟಿ. ನಾರಿನ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಬೆಂಬಲಿಸುತ್ತದೆ ಮತ್ತು ಚಳಿಗಾಲದಲ್ಲಿ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಸಹಾಯವಾಗುತ್ತದೆ.

ದೈಹಿಕವಾಗಿ ಸಕ್ರಿಯವಾಗಿರಿ:

ನಿಯಮಿತವಾದ ವ್ಯಾಯಾಮ ಸಕ್ಕರೆ ಕಾಯಿಲೆಯ ನಿರ್ವಹಣೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಹೀಗಾಗಿ ಚಳಿಗಾಲ ಬಂತು ಎಂದು ಜಡ ಜೀವನ ಶೈಲಿ ಅನುಸರಿಸಬೇಡಿ. ದಿನನಿತ್ಯದ ಕಾರ್ಯ ಚಟುವಟಿಕೆಗಳ ಜೊತೆಗೆ ದೇಹಕ್ಕೆ ಸ್ವಲ್ಪ ವ್ಯಾಯಾಮವನ್ನು ಕೂಡ ನೀಡಿ. ಇದು ಸಕ್ಕರೆ ಕಾಯಿಲೆ ಯನ್ನು ನಿರ್ವಹಣೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ ಮತ್ತು ನಮ್ಮ ಸಂಪೂರ್ಣ ಆರೋಗ್ಯದ ನಿರ್ವಹಣೆ ಕೂಡ ಆಗುತ್ತದೆ. ರಾತ್ರಿ ಹೊತ್ತು ಪದೇಪದೇ ಮೂತ್ರ ವಿಸರ್ಜನೆಗೆ ಹೋಗುವ ಸಾಧ್ಯತೆ ಕೂಡ ಇದರಿಂದ ಕಡಿಮೆ ಆಗುತ್ತದೆ.

ಒಳ್ಳೆಯ ನಿದ್ರೆ ಮಾಡಿ:

ಸಕ್ಕ​ರೆ ಕಾಯಿಲೆಯ ನಿರ್ವಹಣೆಗೆ ಒಳ್ಳೆಯ ನಿದ್ರೆ ಕೂಡ ಬಹಳ ಅವಶ್ಯಕ. ಸರಿಯಾಗಿ ನಿದ್ರೆ ಮಾಡದೇ ಇದ್ದರೆ, ಪ್ರತಿ ರಾತ್ರಿ ಅದೇ ಅಭ್ಯಾಸವಾಗಿ ಆಗಾಗ ಮೂತ್ರ ವಿಸರ್ಜನೆ ಮಾಡಲು ಪ್ರೇರೇಪಿಸುತ್ತದೆ. ಹೀಗಾಗಿ ರಾತ್ರಿಯ ಸಮಯದಲ್ಲಿ ನಿದ್ರೆಗೆ ಹೆಚ್ಚು ಆದ್ಯತೆ ಕೊಡಿ. ಒಳ್ಳೆಯ ನಿದ್ರೆ ನಿಮ್ಮನ್ನು ಕೇವಲ ಸಕ್ಕರೆ ಕಾಯಿಲೆಯ ವಿಚಾರದಲ್ಲಿ ಮಾತ್ರವಲ್ಲ ನಿಮ್ಮ ಸಮಗ್ರ ಆರೋಗ್ಯ ನಿರ್ವಹಣೆಗೂ ಸಹಾಯವಾಗುತ್ತದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!