ಒಬ್ಬ ಹಿರಿಯರನ್ನು ಹಂದಿ, ನಾಯಿ ಎಂದು ಕರೆಯುವ ಯತ್ನಾಳ್’ಗೆ ನಾಚಿಕೆಯಾಗಬೇಕು: ಹೆಚ್.ವಿಶ್ವನಾಥ್

0
Spread the love

ವಿಜಯಪುರ: ಒಬ್ಬ ಹಿರಿಯರನ್ನು ಹಂದಿ, ನಾಯಿ ಎಂದು ಕರೆಯುವ ಯತ್ನಾಳ್‍ಗೆ ನಾಚಿಕೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಜಾತಿಯ ಹಾಗೂ ತಮ್ಮ ಪಕ್ಷದ ನಿರಾಣಿಯಂತಹ ಒಬ್ಬ ಹಿರಿಯರನ್ನು ಹಂದಿ, ನಾಯಿ ಎಂದು ಕರೆಯುವ ಯತ್ನಾಳ್‍ಗೆ ನಾಚಿಕೆಯಾಗಬೇಕು.

Advertisement

ಇವರೊಬ್ಬ ನಾಯಕನಾ? ಯಾರಾದ್ರೂ ಹೀಗೆ ಮಾತನಾಡುತ್ತಾರಾ? ಮುಂದೆ ಬರುವಂತಹ ರಾಜಕಾರಣಿಗಳಿಗೆ ಇವರ ಸಂದೇಶ ಏನು? ಅಯೋಗ್ಯತನಕ್ಕೂ ಒಂದು ಮಿತಿ ಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಯಡ್ಡಿಯೂರಪ್ಪ ಮಗ ವಿಜಯೇಂದ್ರರಿಂದಲೇ ಜೈಲಿಗೆ ಹೋದರು. ಆರ್‌ಟಿಜಿಎಸ್‌ನಲ್ಲಿ  20 ಕೋಟಿ ಲಂಚಾ ಪಡೆದರು. ಯಾರದ್ರೂ ಆರ್‌ಟಿಜಿಎಸ್‌ನಲ್ಲಿ ‌ ಲಂಚ ಪಡಿಯುತ್ತಾರಾ? ಇಂತಹ ಒಬ್ಬ ಪೆದ್ದ ಹಾಗೂ ಲಂಚಕೋರ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ, ಯಾರಿಗಾದರೂ ಗೌರವ ಇದೆಯೇ? ಎಂದು ಅವರು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here