ತಂದೆಯ ಶವ ಬೇಡ..ಹಣ ಬೇಕು ಎಂದ ಪಾಪಿ ಮಗ!

0
Spread the love

ವಿಜಯಸಾಕ್ಷಿ ಸುದ್ದಿ, ಮೈಸೂರು

Advertisement

ಕೊರೊನಾ ಮಹಾಮಾರಿಯಿಂದ ತಂದೆ ಸತ್ತರೆ, ಹೆಣ ನೋಡಲು ಬಾರದ ಪಾಪಿ ಮಗ, ಶವ ನೀವೆ ಸುಡಿ ಹಣ ತಂದು ಕೊಡಿ ಎಂದು ಹೇಳಿರುವ ಅಮಾನವೀಯ ಘಟನೆ ನಡೆದಿದೆ.

ನಗರದ ಹೆಬ್ಬಾಳದ ಸೂರ್ಯ ಬೇಕರಿ ಹತ್ತಿರ ಮನೆಯೊಂದರಲ್ಲಿ ವೃದ್ಧ ನಿವಾಸಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದರು. ತಂದೆ ಮೃತಪಟ್ಟಿರುವ ಕುರಿತು ಅವರಿಂದ ದೂರ ಇದ್ದ ಅವರ ಮಗನಿಗೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಫೋನ್ ಮಾಡಿ ಹೇಳಿದರು. ಆದರೆ, ಇದಕ್ಕೆ ದುಃಖ ವ್ಯಕ್ತಪಡಿಸಬೇಕಾಗಿದ್ದ ಮಗ, ಏನೂ ಆಗದವರಂತೆ ವರ್ತಿಸಿದ್ದಾನೆ. ಅಲ್ಲದೇ, ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ತಂದೆಯ ಬಳಿ ಇರುವ ರೂ. 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ. ನಾನು ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ. ಅಲ್ಲಿಗೆ ಹಣ , ದಾಖಲೆ ತೆಗೆದುಕೊಂಡು ಬಂದು ಎಲ್ಲ ಕೊಟ್ಟು ಬಿಡಿ ಎಂದು ಹೇಳಿದ್ದಾನೆ.

ಆ ಪಾಪಿ ಇಷ್ಟು ಹೇಳಿದ್ದೆ ತಡ ಪಾಲಿಕೆಯ ಸದಸ್ಯ ಶ್ರೀಧರ್, ಆತನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here