HomeGadag News‘ಗಾನ ಮುಂಗಾರು’ ಕಾರ್ಯಕ್ರಮದಲ್ಲಿ ಸಂಗೀತದ ತುಂತುರು

‘ಗಾನ ಮುಂಗಾರು’ ಕಾರ್ಯಕ್ರಮದಲ್ಲಿ ಸಂಗೀತದ ತುಂತುರು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ಭಾರತೀಯರಿಗೆ ಮುಂಗಾರು ಎನ್ನುವುದು ಕೇವಲ ಮಳೆಯಲ್ಲ. ಅದು ಒಂದು ಹಬ್ಬ, ಒಂದು ಉತ್ಸವ, ಸಂಭ್ರಮ ಹಾಗೂ ಇಡೀ ದೇಶದ ಜೀವಾಳ” ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಲಕ್ಷ್ಮೇಶ್ವರ ತಾಲೂಕು ಘಟಕದ ಅಧ್ಯಕ್ಷ ಗುರುರಾಜ ಹವಳದ ಅಭಿಪ್ರಾಯಪಟ್ಟರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಿ.ಎಲ್. ಪಾಟೀಲ ಅವರ ಮನೆಯಲ್ಲಿ ಆಯೋಜಿಸಿದ್ದ ‘ಮಾಸದ ಮಾತು’ ಸರಣಿ ಕಾರ್ಯಕ್ರಮ ‘ಗಾನ ಮುಂಗಾರು – ಸಂಗೀತದ ತುಂತುರು’ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್. ಬರಮಗೌಡ್ರ ಮಾತನಾಡಿ, “ಮುಂಗಾರಿನ ಮಳೆ ಬದುಕಿಗೆ ಜೀವ ತುಂಬಿದರೆ, ಸಂಗೀತ ಆ ಬದುಕಿಗೆ ಚೈತನ್ಯ ತುಂಬುತ್ತದೆ. ಈ ಬಾರಿ ಮುಂಗಾರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳ ಮೂಲಕ ಕೃಷಿಕರಿಗೆ ನೈತಿಕ ಧೈರ್ಯ ತುಂಬುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.

ಹಿರಿಯ ಚಿಂತಕ ಚಂಬಣ್ಣ ಬಾಳಿಕಾಯಿ ಮಾತನಾಡಿ, ಸಾಹಿತ್ಯದ ಜೊತೆಗೆ ಸಮಾಜವನ್ನು ಬೆಸೆಯುವ ಕೆಲಸವನ್ನು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡುತ್ತಿದೆ. ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿ.ಎಂ. ಪೂಜಾರ ಹಾಗೂ ಬಿ.ಎಸ್. ಹರ್ಲಾಪುರ ಮಾತನಾಡಿ, “ಮನುಷ್ಯನ ಬದುಕಿನ ಆರಂಭದಿಂದ ಅಂತ್ಯದವರೆಗೆ ಸಂಗೀತ ಹಾಸುಹೊಕ್ಕಾಗಿದೆ. ಗಾನವನ್ನು ಇಷ್ಟಪಡದ ಮನಸ್ಸೇ ಇಲ್ಲ” ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಅಧ್ಯಕ್ಷತೆ ವಹಿಸಿದ್ದರು. ಧರಣೇಂದ್ರಗೌಡ ಪಾಟೀಲ, ಬೀನಾ ಧರಣೇಂದ್ರಗೌಡ ಪಾಟೀಲ, ಅನ್ನಪೂರ್ಣ ಹರ್ಲಾಪುರ, ಈರಣ್ಣ ಗಾಣಿಗೇರ, ಮಂಜುನಾಥ ಚಾಕಲಬಿ, ನಾಗರಾಜ ಮಜ್ಜಿಗುಡ್ಡ, ಎಚ್.ಎಂ. ಸಪ್ಪಿನ, ಡಿ.ಎಚ್. ಪಾಟೀಲ ಹಾಗೂ ಅರವಿಂದ ದೇಶಪಾಂಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಡೆದ ‘ಗಾನ ಮುಂಗಾರು’ ಸಂಗೀತ ಕಾರ್ಯಕ್ರಮದಲ್ಲಿ ಡಾ. ಎಸ್.ಸಿ. ನೇಕಾರ, ಮಂಜುನಾಥ ಉಮಚಗಿ, ಮಂಜುನಾಥ ಕೊಡ್ಲಿ, ನವೀನ ಅಂಗಡಿ, ರವಿರಾಜ ಶಿಗ್ಲಿ ಹಾಗೂ ಕು. ಅಮೋಘ ಹರಕುಣಿ ಅವರು ನೀಡಿದ ಸುಮಧುರ ಗಾಯನ ಸಂಗೀತಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ‘ಹೆಮ್ಮೆಯ ಕನ್ನಡಿಗ-2026’ ಪ್ರಶಸ್ತಿ ಪುರಸ್ಕೃತ ಹಾಗೂ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಶಂಕರ ಶಿಳ್ಳಿನ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಾಯಕರನ್ನೂ ಗೌರವಿಸಲಾಯಿತು.

“ಮುಂಗಾರಿನ ಮಳೆ ಭೂಮಿಗೆ ಜೀವ ತುಂಬಿದರೆ, ಸಂಗೀತ ಮನಸ್ಸಿಗೆ ಜೀವ ತುಂಬುತ್ತದೆ. ಎರಡೂ ಬದುಕಿನ ಅವಿಭಾಜ್ಯ ಅಂಗಗಳು.”

– ಗುರುರಾಜ ಹವಳದ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಲಕ್ಷ್ಮೇಶ್ವರ ತಾಲೂಕು ಘಟಕ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!