ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ಖಂಡನೀಯ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕುಂದಗೋಳ
ನಗರದ ಗಾಳಿ ಮರೆಮ್ಮ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಮೇಲೆ ಪದೇ ಪದೇ ತನಿಖೆಯನ್ನು ಮಾಡುತ್ತಿರುವುದನ್ನು ಖಂಡಿಸಿ ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಸಿ. ಶಿವಳ್ಳಿ ನೇತೃತ್ವದಲ್ಲಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಶಾಸಕಿ ಕುಸುಮಾವತಿ ಸಿ. ಶಿವಳ್ಳಿ, ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಪದೇಪದೇ ದಾಳಿ ಮಾಡುತ್ತಿರುವುದು ಖಂಡನೀಯ, ಇ.ಡಿ. ಮತ್ತು ಸಿ.ಬಿ.ಐ. ಮೇಲೆ ಒತ್ತಡ ಹೇರಿ ರಾಜಕಾರಣ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿದರು.
ಅರವಿಂದ ಕಟಗಿ ಮಾತನಾಡಿ, ಕೊರೋನಾ ರಾಜ್ಯದಲ್ಲಿ ರುದ್ರ ತಾಂಡವವಾಡುತ್ತಿದೆ. ಅದರ ಕಡೆ ಗಮನ ಕೊಡುವುದನ್ನು ಬಿಟ್ಟು ಪಕ್ಷದ ನಾಯಕರ ಮೇಲೆ ದಾಳಿ ಮಾಡುವುದು ಸಲ್ಲದು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಉಮೇಶ ಹೆಬಸುರ, ಸುರೇಶ ಗಂಗಾಯಿ, ವೆಂಕನಗೌಡ್ರ ಪೊಲೀಸ್‌ಪಾಟೀಲ, ಇರ್ಷಾದ್ ಅಹ್ಮದ್ ಹುಳಗುರ, ಬೀರಪ್ಪ ಕುರಬರ, ಅಡಿವೆಪ್ಪ ಶಿವಳ್ಳಿ, ಬಸಲಿಂಗಪ್ಪ ಕೋರಿ, ರಾಯಸಾಬ ಕಳ್ಳಿಮನಿ, ನಿಂಗಪ್ಪ ಹಳ್ಳಿಕೇರಿ, ಅಪ್ಪಣ್ಣ ಹಿರೇಗೌಡ್ರ, ಸಕ್ರಪ್ಪ ಲಮಾಣಿ, ಮಲ್ಲೇಶ್ ಬೆಳವಡಿ, ಬಾಲಚಂದ್ರ, ಲಕ್ಷ್ಮೀ ಸಂಕಣ್ಣವರ, ರಾಮನಗೌಡ್ರ ಪಾಟೀಲ್, ಸಲೀಂ ಕ್ಯಾಲಕೊಂಡ, ಬಸವರಾಜ ಶಿರಸಂಗಿ, ರಮೇಶ ಲಮಾಣಿ, ಗುರುಶಾಂತ ಪಾಟೀಲ, ಸಿದ್ದಪ್ಪ ಚೂರಿ, ಮಕ್ತುಮಸಾಬ ಲಾಡಸಾಬನವರ್, ಕವಿತಾ ಸೊಟ್ಟಮನವರ್, ಯಲ್ಲಪ್ಪ ದಾಸರ್, ರಫೀಕ್ ನಧಾಪ್, ಅಶ್ಪಕ್ ಪಾಪನ್ನವರ್, ಹನಮಂತ ಲಕ್ಷ್ಮೇಶ್ವರ್, ನಿಂಗವ್ವ ಕುಮ್ಮಣ್ಣವರ್, ವೀಣಾ, ಗೀತಾ ಕೋಟಿಗೌಡ್ರ, ಸಲೀಮ್ ಕಡ್ಲಿ, ಗಿರೀಶ ಮುದಿಗೌಡ್ರ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here