ಕುಬೇರಪ್ಪ ಪರ ಕುಸುಮಾವತಿ ಶಿವಳ್ಳಿ ಪ್ರಚಾರ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕುಂದಗೋಳ
ತಾಲೂಕಿನ ಕಳಸ ಗ್ರಾಮದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ.ಆರ್.ಎಂ. ಕುಬೇರಪ್ಪ ಅವರ ಪರವಾಗಿ ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಸಿ ಶಿವಳ್ಳಿ ಮತಯಾಚನೆಯನ್ನು ಕೈಗೊಂಡರು.
ನಂತರ ಮಾತನಾಡಿದ ಅವರು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿ ಇವರಾಗಿದ್ದು ಇವರಿಗೆ ಪ್ರಥಮ ಪ್ರಾಶಸ್ತದ ಮತ ನೀಡಿ ಗೆಲ್ಲಿಸಿರಿ ಎಂದು ವಿನಂತಿಸಿದರು.
ಈ ವೇಳೆ ಗ್ರಾಮದ ಮುಖಂಡರಾದ ರಾಮನಗೌಡ ಪಾಟೀಲ, ವಿಜಯಕುಮಾರ ಹಾಲಿ, ಇರ್ಷಾದ್ ಹುಲಗುರ, ಬಾಬಾಜಾನ ಖಾತಾಲಸಾಬನವರ, ಹಜರೆಸಾಬ ಬಾವಿಕಟ್ಟಿ, ಯಲ್ಲಪ್ಪ ಹೊಸಮನಿ, ಮೌಲಾಲಿ ಲಾಠಿ, ಮೌಲಾಸಾಬ ಗುಡಾರದ, ಇಸ್ಮಾಯಿಲ್ ಮೊಮಿನ್, ಅಖಂಡಪ್ಪ ಕೆಂಡದ, ಸದ್ದಾಮ ರಾಯಚೂರ ಸೇರಿದಂತೆ ಅನೇಕ ಹಿರಿಯರು ಹಾಗೂ ಪದವೀಧರರು ಉಪಸ್ಥಿತರಿದ್ದರು.
 


Spread the love

LEAVE A REPLY

Please enter your comment!
Please enter your name here