33.6 C
Gadag
Saturday, March 25, 2023

ಕೊರೋನಾ ವಾರಿಯರ್ಸ್ ಮನೆಗೆ ನುಗ್ಗಿದ ನೀರು; ನರಗುಂದ ಪಟ್ಟಣದಲ್ಲಿ ಭಾರಿ ಮಳೆಯಿಂದ ಅವಾಂತರ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ತಾಲೂಕು ಆಸ್ಪತ್ರೆಯ ಆವರಣದಲ್ಲಿರುವ ಕೊರೋನಾ ವಾರಿಯರ್ಸ್ ಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ಘಟನೆ ನಡೆದಿದೆ.
ನೀರು ನುಗ್ಗಿದ ಪರಿಣಾಮ ಎರಡು ದಿನದ ಬಾಣಂತಿ, ಹಸುಗೂಸು ನರಳಾಟ ಪಡುವಂತಾಗಿತ್ತು. ತಾಲೂಕಾಸ್ಪತ್ರೆಯ ಆವರಣದಲ್ಲಿನ ಭಾರತಿ ಪಾಟೀಲ, ಸಂಗಮ್ಮ ಚಿತ್ತರಗಿ ಎಂಬುವರ ಮನೆಗಳಿಗೆ ನೀರು ನುಗ್ಗಿದೆ.
ಇದರಿಂದಾಗಿ ಭಾರತಿ ಪಾಟೀಲರ ಮಗಳು ಸ್ಮೀತಾ ಜಾಧವ ತನ್ನ ಎರಡು ದಿನದ ಹಸುಗೂಸನ್ನು ರಕ್ಷಿಸಲು ಹರಸಾಹಸ ಪಡಬೇಕಾಯಿತು. ಇಷ್ಟೆಲ್ಲಾ ನಡೆದಿದ್ದರೂ ಸ್ಥಳಕ್ಕೆ ತಾಲೂಕಾಡಳಿತದ ಯಾವೊಬ್ಬ ಅಧಿಕಾರಿಯೂ ಬಾರದೇ ಇದ್ದದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,749FollowersFollow
0SubscribersSubscribe
- Advertisement -spot_img

Latest Posts

error: Content is protected !!