20.9 C
Gadag
Monday, October 2, 2023

ಗಾಂಜಾ ಕೃಷಿ, ಸಂಗ್ರಹಣೆ: ಆರೋಪಿ ಬಂಧನ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಹೊಲದಲ್ಲಿ ಗಾಂಜಾ ಬೆಳೆದು, ನಂತರ ಅದನ್ನು ಸಂಗ್ರಹಿಸಿದ್ದ ಆರೋಪದ ಮೇಲೆ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ವ್ಯಕಿಯೋರ್ವನನ್ನು ಬಂಧಿಸಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದ ಕರೆಗೋರಿ ನಿವಾಸಿ ಶರಣಪ್ಪ ದೇವಿ ಬಂಧಿತನಾಗಿದ್ದು, ಆತನಿಂದ 39 ಸಾವಿರ ರೂ. ಮೌಲ್ಯದ 3 ಕೆಜಿ 905 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ತಾನು ಬೆಳೆದಿದ್ದ  ಗಾಂಜಾ ಒಣಗಿಸುವಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!