ಗ್ರಾ.ಪಂ ನೂತನ ಸದಸ್ಯ ಬಸವರಾಜಗೆ ಪಿಂಜಾರ ಯುವಕರಿಂದ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಭ್ಯರ್ಥಿ ಬಸವರಾಜ ಕಟ್ಟಿಮನಿ ಅವರಿಗೆ ಹುಣಸಗಿ ಪಟ್ಟಣದಲ್ಲಿ ಪಿಂಜಾರ ಯುವಕರಿಂದ ಸನ್ಮಾನಿಸಲಾಯಿತು.

ನೂತನ ಸದಸ್ಯ ಬಸವರಾಜ್ ಮಾತನಾಡಿ, ನೀವು ನನಗೆ ಸನ್ಮಾನ ಮಾಡಿದ್ದು ಯಾವ ಕಾಲಕ್ಕೂ ಮರೆಯುವಂತಿಲ್ಲ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದರು.

ಗ್ರಾಮದ ಅಭಿವೃದ್ಧಿಯೇ ನನ್ನ ಮುಂದಿನ ಯೋಜನೆಯಾಗಿದ್ದು ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಗ್ರಾಮದಲ್ಲಿನ ಹಲವಾರು ಸಮಸ್ಯೆಗಳು ಹಾಗೂ ಕುಂದು ಕೊರತೆಗಳಿಗೆ ಮೊದಲು ಸ್ಪಂದಿಸುತ್ತೆನೆ ಕುಡಿಯುವ ನೀರು, ಚರಂಡಿಯ ವ್ಯವಸ್ಥೆ, ಹೊಸದಾಗಿ ಶೌಚಾಲಯಗಳ ನಿರ್ಮಾಣ, ಗ್ರಾಮದಲ್ಲಿನ ಸಿಸಿ ರಸ್ತೆಗಳ ನಿರ್ಮಾಣ, ಗ್ರಾಮೀಣ ಅಡಿಯಲ್ಲಿ ಬರುವ ನರೇಗ ದಿಂದ ( ಉದ್ಯೋಗ ಖಾತ್ರಿ ) ಅನುದಾನ ಪಡೆದು, ಬೀದಿದೀಪ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳ ಕಡೆಗೆ ಹೆಚ್ಚು ಗಮನ ಹರಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಯುವ ನಾಯಕ ಸೋಪಿಸಾಬ ಡಿ ಸುರಪುರ, ಯುವ ಮುಖಂಡ ಹುಸೇನಸಾಬ ಗಾದಿ, ಸೈಯದ್ ದಾವಲಸಾಬ ಡಿ ಬೆಣ್ಣೂರ, ನಾಗಪ್ಪ ಬೋವಿ, ಸಾಬಣ್ಣ ಮಲಗಲದಿನ್ನಿ ಇತರರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here