ಡ್ರಗ್ಸ್ ದಗಲ್ಬಾಜಿ: ಮಾಜಿ ಸಚಿವನ ಮಗನ ಬಂಗ್ಲೆ ಮೇಲೆ ರೇಡ್

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರ: ಡ್ರಗ್ಸ್ ದಂಧೆ ಮತ್ತು ದಗಲ್ಬಾಜಿಯ ಮೇಲೆ ಮುಗಿ ಬಿದ್ದಂತಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಮಂಗಳವಾರ ಮಾಜಿ ಸಚಿವರ ಪುತ್ರನೊಬ್ಬನ ಬಂಗ್ಲೆ ಮೇಲೆ ದಾಳಿ ನಡೆಸಿದ್ದಾರೆ.

ಮಾಜಿ ಸಚಿವ, ಜನತಾ ಪರಿವಾರದ ನಾಯಕ ದಿ. ಜೀವರಾಜ್ ಆಳ್ವಾರ ಪುತ್ರ ಆದಿತ್ಯ ಆಳ್ವಾರ ಖಾಸಗಿ ಬಂಗ್ಲೆ ಮೇಲೆ ಮಂಗಳವಾರ ಡ್ರಗ್ಸ್ ರೇಡ್ ನಡೆದಿದೆ.

ಕರ್ನಾಟಕ ಸಿಸಿಬಿ ಪೊಲೀಸರು ಡ್ರಗ್ಸ್ ಮಾಫಿಯಾದ ಮೇಲೆ ಸಮರ ಸಾರಿದ ನಂತರ, ಆರೋಪಿತರ ಪಟ್ಟಿಯಲ್ಲಿರುವ ಆದಿತ್ಯ ಆಳ್ವಾ ಪರಾರಿಯಾಗಿದ್ದಾರೆ.

ಇಲ್ಲಿವರೆಗೂ ಸಿಸಿಬಿ ಈ ಪ್ರಕರಣದಲ್ಲಿ 15 ಜನರ ಮೇಲೆ ಕೇಸು ದಾಖಲಿಸಿದ್ದು, ಅದರಲ್ಲಿ 9 ಜನರ ಬಂಧನವಾಗಿದೆ. ಸಿಗದೇ ಇರುವ 6 ಜನರಲ್ಲಿ ಆದಿತ್ಯ ಆಳ್ವಾ ಕೂಡ ಒಬ್ಬ. 4 ಎಕರೆ ವಿಸ್ತೀರ್ಣದ ಈ ಬಂಗ್ಲೆ ಆವರಣದಲ್ಲೇ ಆದಿತ್ಯ ರೇವ್ ಪಾರ್ಟಿ ಆಯೋಜಿಸುತ್ತಿದ್ದ ಎಂಬ ಅಪಾದನೆಗಳಿವೆ. ಸಿಸಿಬಿ ಪೊಲೀಸರು ಈ ದಾಳಿಯಲ್ಲಿ ಹಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here