ನರಗುಂದ: ಕೃಷಿ ಪರಿಕರ ಮಾರಾಟಗಾರರ ಸಭೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆ ವತಿಯಿಂದ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಅ. ೧೫ರಂದು ಆಯೋಜಿಸಲಾಗಿತ್ತು. ಗದುಗಿನ ಸಹಾಯಕ ಕೃಷಿ ನಿರ್ದೇಶಕ ಜಾರಿದಳದ ಸಂತೊಷ ಪಟ್ಟದಕಲ್ ಕೃಷಿ ಪರಿಕರ ಮಾರಾಟಗಾರರಿಗೆ ಕೆಲವು ನಿರ್ದೇಶನಗಳನ್ನು ನೀಡಿದರು.
ಪಟ್ಟದಕಲ್ ಸಭೆಯಲ್ಲಿ ಮಾತನಾಡಿ, ಕಂಪನಿಗಳಿಂದ ಕೀಟನಾಶಕ ಕೊಳ್ಳುವಾಗ ಕೀಟನಾಶಕಗಳೊಂದಿಗೆ ಮಾಹಿತಿ ಚೀಟಿ ಇರುವುದನ್ನು ಪರೀಕ್ಷಿಸಿ ಖಾತರಿಪಡಿಸಿಕೊಳ್ಳಬೇಕು. ಪರವಾನಗಿಯಲ್ಲಿ ನಮೂದಿಸಿದ ಕೀಟನಾಶಕಗಳನ್ನು ಮಾತ್ರ ಮಾರಾಟ ಮಾಡಬೇಕು. ನೋಂದಾಯಿತ ಜೈವಿಕ ಕೀಟನಾಶಕಗಳನ್ನು ಮಾತ್ರ ಮಾರಾಟ ಮಾಡಬೇಕು.
ನೋಂದಾಯಿತವಲ್ಲದ ಲಘು ಪೋಷಕಾಂಶಗಳನ್ನು ಮಾರುವಂತಿಲ್ಲ. ಅವಧಿ ಮುಗಿದ ಕೀಟನಾಶಕಗಳನ್ನು ಮಾರಾಟ ಮಾಡಕೂಡದು. ಈ ತರಹದ ಕೀಟನಾಶಕಗಳ ಮೇಲೆ ನಮೂದಿಸಿದ ಅವಧಿ ಮುಗಿಯುವ ದಿನಾಂಕವನ್ನು ಯಾವುದೇ ಕಾರಣಕ್ಕೂ ತಿರುವಂತಿಲ್ಲ. ಗಂಧಕ ಮೂಲದ ಕೀಟನಾಶಕಗಳನ್ನು ಮಾರಾಟ ಮಾಡುವಾಗ ಈ ಕೀಟನಾಶಕಗಳ ಸ್ಟಾಕ್‌ನ್ನು ಪ್ರತ್ಯೇಕ ಸ್ಟಾಕ್ ಬುಕ್‌ನಲ್ಲಿ ನಮೂದಿಸುವುದು.

ಕಾಯ್ದೆ ಉಲ್ಲಂಘಿಸಬೇಡಿ:
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಸಭೆಯಲ್ಲಿ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಯಾವುದೇ ಸಂದರ್ಭದಲ್ಲಿ ಕಾಯ್ದೆಗಳನ್ನು ಉಲ್ಲಂಘಿಸದೆ ಕಾಯ್ದೆಗನುಸಾರವಾಗಿ ತಮ್ಮ ವ್ಯಾಪಾರ ನಡೆಸಿಕೊಂಡು ಹೋಗಬೇಕೆಂದು ಸೂಚಿಸಿದರು.

ರಸಗೊಬ್ಬರ ಚೀಲದ ಮೇಲೆ ನಮೂದಿಸಿದ ಮೂಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವಂತಿಲ್ಲ. ಬೀಜ ಮಾರಾಟ ಮಾಡುವಾಗ ಬಿಲ್ ಬುಕ್‌ನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಬೀಜ ಮಾರಾಟ ಮಾಡುವವರು ಕಡ್ಡಾಯವಾಗಿ ಮೂಲ ಪ್ರಮಾಣಪತ್ರ ಪಡೆಯಬೇಕು, ರಸಗೊಬ್ಬರ ಮಾರಾಟ ಮಾಡುವಾಗ ಕಡ್ಡಾಯವಾಗಿ ಪಿಓಎಸ್ ಮಶಿನ್ ಬಿಲ್ಲಿನೊಂದಿಗೆ ಕೈ ಬರಹದ ಬಿಲ್ಲನ್ನು ನೀಡಬೇಕೆಂದರು. ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕೆಂದು ಕೃಷಿ ಪರಿಕರ ಮಾರಾಟಗಾರರಿಗೆ ಪಟ್ಟದಕಲ್ ಸೂಚಿಸಿದರು.
ಕೃಷಿ ಇಲಾಖೆ ತಾಂತ್ರಿಕ ವರ್ಗದ ಅಧಿಕಾರಿ ಶ್ರೀಶೈಲ ಅಂಗಡಿ, ಎಸ್.ಆರ್. ಭಜಂತ್ರಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ವೆಂಕಟೇಶ ಗುಡಿಸಾಗರ ಸ್ವಾಗತಿಸಿದರು ಕೃಷಿ ಇಲಾಖೆ ಸಿಬ್ಬಂದಿ ಸಾಠೆ ಶಿವಾಜಿ ನಿರ್ವಹಿಸಿದರು.
 


Spread the love

LEAVE A REPLY

Please enter your comment!
Please enter your name here