ವಿಜಯಸಾಕ್ಷಿ ಸುದ್ದಿ, ಮೈಸೂರು
ಜನರ ಕಷ್ಟಗಳಿಗೆ ಸ್ಪಂದಿಸಿ ಎಂದು ಉಸ್ತುವಾರಿ ಕೊಟ್ಟಿದ್ದರೆ, ಕೆಲ ಮಂತ್ರಿಗಳಿಗೆ ಅರ್ಧರಾತ್ರಿಯಲ್ಲಿಯೇ ಐಶ್ವರ್ಯ ಸಿಕ್ಕವರಂತೆ ಆಡುತ್ತಿದ್ದಾರೆ.
ಆಕಾಶನೇ ಕೈಗೆ ಸಿಕ್ಕಿದೆ ಎಂದು ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ತರವಲ್ಲದ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ನಗೆಪಾಟಲಿಗೆ ಇಡಾಗಬೇಡಿ. ದುಂದುವೆಚ್ಚದ ಮೂಲಕ ಸರ್ಕಾರದ ಹೊರೆಯನ್ನ ಯಾಕೆ ಹೆಚ್ಚಿಸುತ್ತೀರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ
2006 ರಲ್ಲಿ ಕಷ್ಟಪಟ್ಟು ಕೆಲಸ ಮಾಡಿದೆ, ಅದರ ಫಲವನ್ನು ಯಾರೋ ಉಂಡರು ಎಂದು ಅಸಮಾಧಾನ ಹೊರ ಹಾಕಿದರು.
ಕೇಂದ್ರ ಸರ್ಕಾರ ಕರ್ನಾಟಕವನ್ನು ಲೆಕ್ಕಕ್ಕಿಟ್ಟಿಲ್ಲ. ಅವರು ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿ ಇದ್ದಾರೆಂಬುವುದನ್ನು ಅನ್ನೋದನ್ನ ಮರೆತಿದ್ದಾರೆ.
ರಾಜ್ಯ ಸರ್ಕಾರ ಮಾಡಿರುವ ನಿಗಮ ಹಾಗೂ ಪ್ರಾಧಿಕಾರದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಲ್ಲಿ ಏನಿದೆ? ಕೆಲವು ನಿಗಮ ಮಂಡಳಿಗಲ್ಲಿ 50 ಲಕ್ಷ ರೂ.ಕೂಡಾ ಇಲ್ಲ. ಆದರೂ ಅವುಗಳ ಅಭಿವೃದ್ಧಿಗೆ ಕೋಟಿ ಕೋಟಿ ಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ರಾಜ್ಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ ಎಂದರು.