ಮಳೆಗೆ ಮನೆ ಕುಸಿತ : ಎತ್ತು, ಹೋರಿ ಕರುಗಳನ್ನು ರಕ್ಷಿಸಿದ ಗ್ರಾಮಸ್ಥರು

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಯಲಬುರ್ಗಾ : ನಿರಂತರ ಮಳೆಯಿಂದ ತಾಲೂಕಿನ ಕರಮುಡಿ ಗ್ರಾಮದ ವೀರಪ್ಪ ಮಂಡಲಗೇರಿ ಎಂಬುವವರ ಮನೆಯ ದನದ ಕೊಟ್ಟಿಗೆಯ ಛಾವಣಿ ಸಂಪೂರ್ಣ ಕುಸಿದಿದ್ದರಿಂದ ಕೊಟ್ಟಿಗೆಯಲ್ಲಿದ್ದ ಒಂದು ಎತ್ತು, ಎರಡು ಹೋರಿ ಕರುಗಳು ಮಣ್ಣಿನಡಿ ಸಿಲುಕಿದ್ದವು.

ಬೆಲೆಬಾಳುವ ಜಾನುವಾರುಗಳು ಮಣ್ಣಿನಡಿ ಸಿಲುಕಿದ್ದವು. ಗ್ರಾಮದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮಣ್ಣಿನಡಿ ಸಿಲುಕಿದ್ದ ಜಾನುವಾರುಗಳನ್ನು ಹೊರತೆಗೆದು ಅವುಗಳ ಪ್ರಾಣ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಜಾನುವಾರು ಮಾಲೀಕನ ಜತೆಗೆ ಗ್ರಾಮದ ಗ್ರಾಮಸ್ಥರು ಕೂಡಿ ಜಾನುವಾರುಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಶು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಯಿತು.

ಪರಿಹಾರಕ್ಕೆ ಆಗ್ರಹ : ಮನೆ ಕುಸಿತದಿಂದ ಅಪಾರ ವಸ್ತುಗಳು ಹಾನಿಯಾಗಿದ್ದು ಕುಟುಂಬಕ್ಕೆ ತಾಲೂಕಾಡಳಿತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here