36.4 C
Gadag
Friday, June 2, 2023

ರೈತರ ಪ್ರತಿಭಟನೆ ಹಿಂದೆ ಭಯೋತ್ಪಾದಕರು, ಖಲಿಸ್ತಾನ್, ಕಾಂಗ್ರೆಸ್ ನವರು ಇದ್ದಾರೆ : ಸಚಿವ ಬಿ.ಸಿ ಪಾಟೀಲ್

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ, ಭಯೋತ್ಪಾದಕರ ರೀತಿಯಲ್ಲಿ ಭಯೋತ್ಪಾದನೆ ಮಾಡಿದಂತಹ ಭಯಾನಕ ಕೃತ್ಯ ಎಂದು ಸಚಿವ ಬಿ.ಸಿ ಪಾಟೀಲ್ ದೆಹಲಿ ದಂಗೆಯನ್ನು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಕೊಪ್ಪಳದಲ್ಲಿ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಈ ರೀತಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು, ಇತಿಹಾಸದಲ್ಲಿಯೇ ಇಲ್ಲ. ಇದರ ಹಿಂದೆ ಭಯೋತ್ಪಾದಕರು, ಖಲಿಸ್ತಾನ್, ಕಾಂಗ್ರೆಸ್ ನವರು ಇದ್ದಾರೆ. ಮೋದಿಯವರ ಜನಪ್ರಿಯತೆ ಹಾಗೂ ಕೇಂದ್ರ ಸರ್ಕಾರವನ್ನು ಕೆಡವಲು ಆಗುವುದಿಲ್ಲ ಎಂದು ತಿಳಿದು, ಭಯೋತ್ಪಾದಕರಿಗೆ ರೈತರ ಪಟ್ಟ ಹಾಕಿ ದೆಹಲಿಯಲ್ಲಿ ಕೃತ್ಯ ನಡೆಸಲಾಗಿದೆ ಎಂದರು.

ಇನ್ನು ನನ್ನ ಈ ಮಾತುಗಳಿಗೂ ಈಗಲೂ ಬದ್ಧನಾಗಿದ್ದು, ಸಂವಿಧಾನದಲ್ಲಿ ಹಾಗೂ ದೇಶದ ಹಿರಿಮೆಯಲ್ಲಿ ಕೆಂಪು ಕೋಟೆಗೆ ತನ್ನದೇ ಆದ ಗೌರವ ಇದೆ. ಕೆಂಪು ಕೋಟೆಯ ಮೇಲೆ ಭಾರತದ ಧ್ವಜ ಬಿಟ್ಟು, ಬೇರೆ ಧ್ವಜಗಳಿಗೂ ಕನಸಿನಲ್ಲೂ ಅವಕಾಶವಿಲ್ಲ. ಇಂತಹ ಸಂಧರ್ಭದಲ್ಲಿ ಕೆಂಪು ಕೋಟೆ ಮೇಲೆ ಬೇರೆ ಧ್ವಜ ಹಾರಿಸ್ತಾರೆ ಅಂದ್ರೆ ಅವರನ್ನು ಭಯೋತ್ಪಾದಕರನ್ನದೇ ಮತ್ತೇನೆಂದು ಕರೆಯಬೇಕು. ಇವರಿಲ್ಲೇರಿಗೂ ಪಾಕಿಸ್ತಾನ ಹಾಗೂ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದೆ ಎಂದು ವಾಗ್ದಾಳಿ ನಡೆಸಿದರು.

ಹೆಚ್.ಕೆ ಪಾಟೀಲ್ರು ಯಾವತ್ತಾದ್ರೂ ಬೇಸಾಯ ಮಾಡಿದ್ದಾರಾ..?

ದೆಹಲಿಯಲ್ಲಿ ನಡೆಯುತ್ತಿರುವ ಭಯೋತ್ಪಾದಕರ ಕೃತ್ಯಕ್ಕೆ ರೈತರ ಬಣ್ಣ ಕಟ್ಟುತ್ತಿರುವ ಹೆಚ್.ಕೆ ಪಾಟೀಲರು ಯಾವತ್ತಾದ್ರೂ ಬೇಸಾಯ ಮಾಡಿದ್ದಾರಾ, ಅಥವಾ ಹೊಲದಲ್ಲಿ ಒಂದು ಹನಿ ಸುರಿಸಿ ಬಿತ್ತನೆ ಮಾಡಿದ್ದಾರಾ ಮೊದಲು ಹೇಳಲಿ.‌ಇಂತಹ ಕೃತ್ಯಕ್ಕೆ ಬೆಂಬಲಿಸುವ ಅವರು, ಮತ್ತು ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ನಿಜವಾದ ರೈತರು ಯಾರೂ ಸಹ ಪ್ರತಿಭಟನೆ ಮಾಡ್ತಾ ಇಲ್ಲ. ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾ ಇರೋ ಎಲ್ಲಾರು ಭಯೋತ್ಪಾದಕರು ಎಂದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Posts