ಸತ್ಯ, ಪ್ರಾಮಾಣಿಕತೆಯ ವ್ಯಕ್ತಿಗೆ ಹೆಚ್ಚು ಗೌರವ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ
ಸಂಘ, ಸಂಸ್ಥೆ, ಸರಕಾರಿ ಸೇವೆ, ವಿದ್ಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಪ್ರಾಮಾಣಿಕತೆ, ಸತ್ಯ, ನಿಷ್ಠೆಯಿಂದ, ದುಡಿದರೇ ಸಮಾಜದಲ್ಲಿ ಹೆಚ್ಚು ಗೌರವ ಸಿಗುವುದು. ಅಂತಹ ಜೀವನವನ್ನು ಸೇವಾ ಅವಧಿಯಲ್ಲಿ ರೂಢಿಸಿಕೊಳ್ಳಬೇಕು ಎಂದು ಗದಗ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರು, ತಾಲೂಕಾ ಕೃಷಿಕ ಸಮಾಜ ಅಧ್ಯಕ್ಷರು, ಗದಗ ಜಿಲ್ಲಾ ಶ್ರೇಷ್ಠ ವರ್ತಕ ಪ್ರಶಸ್ತಿ ಪುರಸ್ಕೃತರು, ನಂಜನಗೂಡ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳಮಠ ಇಲ್ಲೂರ ತೋಟ ಗೌರವ ವಿಚಾರಣಾಕರ್ತ ನಾರಾಯಣ ಹ ಇಲ್ಲೂರ, ಹೇಳಿದರು.
ಇಲ್ಲಿಯ ರಾಯರ ಮಠದಲ್ಲಿ ಜ ಅನ್ನದಾನೀಶ್ವರ ವಿದ್ಯಾ ಸಮಿತಿಯಲ್ಲಿ 33 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಹಾಜಿ ಹುಸೇನಬಾಷುಸಾಬ ಮುಲ್ಲಾ ಅವರನ್ನು ಸನ್ಮಾನಿಸಿ ಮಾತನಾಡಿದರು.
ಮಂತ್ರಾಲಯ ರಾಯರ ಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಅನ್ಯೋನ್ಯ ಬಾಂಧವ್ಯವಿದೆ. ಮುಲ್ಲಾ ಮನೆತನಕ್ಕೂ ಇಲ್ಲೂರ ಮನೆತನಕ್ಕೂ ನೂರಾರೂ ವರ್ಷಗಳಿಂದ ಅವಿನಾನುಭಾವ ಸಂಬಂಧವಿದೆ. ಇಲ್ಲೂರ ಮನೆತನಕ್ಕೆ ಮುಲ್ಲಾ ಅವರ ಕೊಡುಗೆ , ಸೇವೆ ಅಮೂಲ್ಯವಾಗಿದೆಂದರು.
ಬೆಲ್ಲದ ಕಾಲೇಜ ಕಮಿಟಿ ಮಾಜಿ ಉಪಕಾರ್ಯಾಧ್ಯಕ್ಷ, ಪುರಸಭೆ ಮಾಜಿ ಸದಸ್ಯ ಕಾಂತರಾಜ ಹಿರೇಮಠ ಮಾತನಾಡಿ, ಭಕ್ತಿ, ಶ್ರದ್ಧೆ, ವಿಶ್ವಾಸ, ಸೇವೆಯಲ್ಲಿದ್ದರೇ ಸಮಾಜ ಪ್ರೋತ್ಸಾಹಿಸುವುದು ಎಂದು ತಿಳಿಸಿ, ಮುಲ್ಲಾ ಅವರ ಸೇವೆ ಇಂದಿನ ಸಮಾಜಕ್ಕೆ ಹಾಗೂ ಸೇವಾಕರ್ತರಿಗೆ, ನೌಕರರಿಗೆ ಮಾರ್ಗದರ್ಶನವಾಗಿದೆ ಎಂದರು.
ಅಂಜುಮನ್ ಏ ಇಸ್ಲಾಂ ಕಮೀಟಿ ಮಾಜಿ ಅಧ್ಯಕ್ಷರು, ತಾಲೂಕ ಮುಸ್ಲಿಂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಬಿಸಾಬ ಕೆಲೂರ, ಪುರಸಭಾ ಸದಸ್ಯರು, ಹೋರಾಟಗಾರ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಮುಲ್ಲಾ ಅವರ ಸೇವೆಯನ್ನು ಪ್ರಶಂಸನೆ ಮಾಡಿದರು.
ಸಮಾರಂಭದಲ್ಲಿ ಗೋವಿಂದರಾಜ ಹೆಗ್ಗಡಾಳ, ಪುರಸಭಾ ಸದಸ್ಯ ರಾಜಾಭಕ್ಷಿ ಬೆಟಗೇರಿ, ಶಿವಪ್ಪ ಚಿಕ್ಕಣ್ಣವರ, ಸಂತೋಷ ಹಿರೇಮನಿ, ಧ್ರುವ ಹೂಗಾರ, ಗೌಸ ಮೋದಿನ ಮಕಾಂದಾರ, ಮೌಲಾಸಾಬ ಬಾಗವಾನ, ಮಲ್ಲೇಶ ಹರಿಜನ, ಸಂಗಪ್ಪ ಕಂಬಳ್ಯಾಳ, ಸುರೇಶ ಹಲವಾಗಲಿ, ಹಾಜಿ ಬಾಬುಸಾಬ ನಾಗರಹಳ್ಳಿ, ಎ ಕೆ ಮುಲ್ಲಾನವರ, ಎಂ ಎಚ್ ತಳಗಡೆ, ಶಿವರಾಜ ಅಸುಂಡಿ, ನಾಗರಾಜ ಹಾನಗಲ್ಲ, ಕೃಷ್ಣ ಆರ್ ಸಾವುಕಾರ, ಮಂಜಪ್ಪ ದಂಡಿನ, ಪ್ರವೀಣ ವಡ್ಡಟ್ಟಿ, ನಿಂಗರಾಜ ಮೇಗಲಮನಿ, ಶಿವಾನಂದ ದೊಡ್ಡಮನಿ, ಕಾಸೀಂಮಸಾಬ ಕೊಕ್ಕರಗುಂದಿ, ಗಣೇಶ ಹಾತಲಗೇರಿ, ಮೊದಲಾದವರಿದ್ದರು. ಪತ್ರಕರ್ತ ದಿಲೀಪಕುಮಾರ ಜೋಶಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here