HomeCrime Newsಅಂದರ್-ಬಾಹರ್ ಜೂಜಾಟ: ಉದ್ಯಮಿ ಸೇರಿ 12 ಜನರ ಬಂಧನ, ಇಬ್ಬರು ಪರಾರಿ

ಅಂದರ್-ಬಾಹರ್ ಜೂಜಾಟ: ಉದ್ಯಮಿ ಸೇರಿ 12 ಜನರ ಬಂಧನ, ಇಬ್ಬರು ಪರಾರಿ

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಗದಗ ನಗರ ಹಾಗೂ ಗಜೇಂದ್ರಗಡ ಪೊಲೀಸರು ದಾಳಿ ಮಾಡಿ ಉದ್ಯಮಿ ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಗಜೇಂದ್ರಗಡ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಗದಗನ ನಗರ ಠಾಣೆಯ ಸಮೀಪದಲ್ಲಿಯೇ ಇರುವ ಆನಂದ ಮಾಂಸಾಹಾರಿ ಹೊಟೇಲ್ ಬಳಿಯ ಬಟಾ ಬಯಲು ಜಾಗೆಯಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಮಲ್ಲಿಕಾರ್ಜುನ ಬಸಪ್ಪ ಕುರ್ತಕೋಟಿ, ಫಕ್ಕಿರೇಶ್ ಸಿದ್ದಪ್ಪ ನ್ಯಾವಳ್ಳಿ, ಮಲ್ಲೇಶ್ ಲಕ್ಷ್ಮಣ್ ಚವ್ಹಾಣ, ಮಲ್ಲಿಕಾರ್ಜುನ ಪ್ರಭುಲಿಂಗಪ್ಪ ಕುಸುಗಲ್, ಮಾಬುಸಾಬ ದಾವಲಸಾಬ ಡಂಬಳ, ಅಶೋಕ ಶಂಕ್ರಪ್ಪ ಕೋಳಿವಾಡ, ಯಲ್ಲಪ್ಪ ಗವಿಯಪ್ಪ ಕೆಂಚಣ್ಣವರ, ಸಿದ್ದಲಿಂಗಯ್ಯ ಪ್ರಭಯ್ಯ ಮರಿಯಣ್ಣವರ, ಈರಣ್ಣ ಬಸಪ್ಪ ಹವಳಣ್ಣವರ್, ಹಾಗೂ ಅಶೋಕ ಬಸವರಾಜ್ ಉಳವಿ ಪೊಲೀಸರ ಬಲೆಗೆ ಬಿದ್ದವರು. ಬಂಧಿತರಿಂದ 11200 ರೂ,ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಗಜೇಂದ್ರಗಡ ತಾಲೂಕಿನ ಚಿಲಝರಿ ಗ್ರಾಮದ ಸರಕಾರಿ ಹಳ್ಳದ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಬೆನ್ನತ್ತಿದ್ದ ಪೊಲೀಸರ ಕೈಗೆ ಇಬ್ಬರು ಸಿಕ್ಕಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಟೇಲರ್ ರೇವಣಸಿದ್ದಯ್ಯ ಚನ್ನಬಸಯ್ಯ ಚೌಕಿಮಠ, ಕೆಂಪಜಂಬಣ್ಣ ಮಾರಿಯಪ್ಪ ರಾಹುಲ್ ಅವರಿಂದ 7100 ವಶಪಡಿಸಿಕೊಂಡಿದ್ದಾರೆ. ಪರಶಪ್ಪ ದುರಗಪ್ಪ ದಾರೋತ್ತರ ಹಾಗೂ ಕುಮಾರ್ ದಾರಪ್ಪ ರಾಠೋಡ ಪರಾರಿಯಾಗಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!