HomeCrime Newsಅಂದರ್-ಬಾಹರ್ : 12 ಜನರ ಬಂಧನ, 6 ಜನ ಪರಾರಿ

ಅಂದರ್-ಬಾಹರ್ : 12 ಜನರ ಬಂಧನ, 6 ಜನ ಪರಾರಿ

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ವಡವಿ ಹೊಸೂರು ಹಾಗೂ ಹರಿಪುರ ಗ್ರಾಮದಲ್ಲಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದ 12 ಜನರನ್ನು ಬಂಧಿಸಲಾಗಿದ್ದು, 6 ಜನ ಪರಾರಿಯಾಗಿದ್ದಾರೆ. ಬಂಧಿತರಿಂದ ಸುಮಾರು 9300 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.

ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಹರಿಪುರ ಗ್ರಾಮದ ಗುರುಪಾದಯ್ಯ ಸಿದ್ದರಾಮಯ್ಯ ಹಡಗಲಿಮಠ, ಶಂಕ್ರಪ್ಪ ಅಮರಪ್ಪ ಶಿವಶಿಂಪರ್, ಮಾಬುಸಾಬ ರಾಜೇಸಾಬ್ ಒಂಟಿ, ಶರಣಯ್ಯ ಸಿದ್ದರಾಮಯ್ಯ ಹಡಗಲಿಮಠ, ವೀರಭದ್ರಪ್ಪ ವೀರಪ್ಪ ಮುರಶಿಲ್ಲಿ, ಶಂಕ್ರಪ್ಪ ಗಂಗಪ್ಪ ಸೋಂಟಪುರ, ಶಿರಹಟ್ಟಿ ಪಟ್ಟಣದ ಫಕ್ಕೀರೇಶ್ ಮಾಯಪ್ಪ ವಾಲಿಕಾರ, ಮಂಜಪ್ಪ ಶೆಟ್ಟೆಪ್ಪ ಕುರಿ ಹಾಗೂ ನಿತೀಶ್ ವೀರನಗೌಡ ಮಣಕವಾಡ ಎಂಬುವವರನ್ನು ಬಂಧಿಸಲಾಗಿದೆ.

ಅದರಂತೆ ವಡವಿ ಹೊಸೂರು ಗ್ರಾಮದಲ್ಲಿ ಜಿಲ್ಲಾ ಅಪರಾಧ ವಿಭಾಗದ ಟಿ.ಮಹಾಂತೇಶ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಆರು ಜನ ಪರಾರಿಯಾಗಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದ ಸೈಯದ್ ಬಾಬುಸಾಬ ದರೇಖಾನ್, ಬಾಲೇಹೊಸೂರು ಗ್ರಾಮದ ಶೇಖಪ್ಪ ಬಸಪ್ಪ ಒಂಟಿಪಡೆಪ್ಪನವರ, ಕೊಗಾನೂರಿನ ಶರಣಬಸಪ್ಪ ಬಸವರಾಜ್ ಚೆನ್ನೂರು ಬಂಧಿತರಾಗಿದ್ದಾರೆ.

ವಡವಿ ಹೊಸೂರು ಗ್ರಾಮದ ಮೌನೇಶ್ ಬಡಿಗೇರ, ಹೇಮಂತ್, ಹಾಲಪ್ಪ ಭಾವಿಮನಿ, ಯಲ್ಲಪ್ಪ ನೀಲಪ್ಪ ಬೈರಮ್ಮನವರ, ಲಕ್ಷ್ಮೇಶ್ವರದ ನೌಶಾದ್ ಆಡೂರ ಹಾಗೂ ಮುರಡಿಯ ಕೃಷ್ಣಾ ಮುರಡಿ ಪರಾರಿಯಾಗಿರುವ ಆರೋಪಿಗಳಾಗಿದ್ದಾರೆ.

ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!