ಏ ಬೊಮ್ಮಾಯಿ ಯಾವಾಗಾದ್ರೂ ಕುರಿ ಕಾದಿದ್ದಿಯೇನಯ್ಯಾ ?

0
Spread the love

  • ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ವಿಜಯಸಾಕ್ಷಿ ಸುದ್ದಿ, ವಿಜಯಪುರ:

Advertisement

ಏ ಬಸವರಾಜ ಬೊಮ್ಮಾಯಿ ನೀನ್ಯಾವಾಗಾದ್ರೂ ಕುರಿ ಕಾದಿದ್ಯಾ..? ಯಾವಾತ್ತಾದ್ರೂ ಕರಿ ಕಂಬಳಿ ಹೊತ್ತಿದ್ದೀಯೇನಯ್ಯ..? ಅದನ್ನ ಹೊತ್ಕೊಳ್ಳೊಕೆ ಯೋಗ್ಯತೆ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಕಂಬಳಿ ಹೊತ್ತಕೊಳ್ಳಲು ಯೋಗ್ಯತೆ ಬೇಕು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ವಿಜಯಪುರದಲ್ಲಿ ತಿರುಗೇಟು ನೀಡಿದ ಅವರು, ಕಾಗಿನೆಲೆಯಲ್ಲಿ ಕನಕ ಗುರುಪೀಠ ಸ್ಥಾಪನೆ, ವಿಜಯಪುರ ಮಹಿಳಾ ವಿವಿಗೆ ಅಕ್ಕಮಹಾದೇವಿ ನಾಮಕರಣ, ಎಲ್ಲ ಕಚೇರಿಗಳಲ್ಲೂ ಬಸವಣ್ಣನವರ ಪೋಟೋ ಹಾಕಿಸಿದ್ದು, ಕಿತ್ತೂರು ಚನ್ನಮ್ಮ ಜಯಂತಿ ಸೇರಿ ಹಲವು ಜಯಂತಿಗಳನ್ನು ಮಾಡಿಸಿದ್ದು ಸಿದ್ದರಾಮಯ್ಯ. ಬಸವರಾಜ ಬೊಮ್ಮಾಯಿ ನೀನೆಲ್ಲಿದ್ದಿಯಪ್ಪಾ..? ಎಂದು ಗುಡುಗಿದರು.

ಈಶ್ವರಪ್ಪನಿಗೆ ತಾನು ಕುರುಬ ಎಂದು ಹೇಳಿಕೊಳ್ಳಲೂ ಭಯ. ಆದರೆ, ನಾನು ಎಲ್ಲಾ ಕಡೆ ಎದೆತಟ್ಟಿ ಹೆಳ್ತಿನಿ ನಾನೊಬ್ಬ ಕುರುಬ, ಕುರುಬ ಕುರುಬ ಎಂದು ಕುಟುಕಿದರು.


Spread the love

LEAVE A REPLY

Please enter your comment!
Please enter your name here