- ಸಚಿವ ಸ್ಥಾನದ ಸುಳಿವು ನೀಡಿದ ಶಾಸಕ ಸುರಪುರ ಶಾಸಕ ರಾಜುಗೌಡ
ವಿಜಯಸಾಕ್ಷಿ ಸುದ್ದಿ, ಯಾದಗಿರಿ
ನಾನು ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಪ್ರಮಾಣ ವಚನ ಸ್ವೀಕಾರ ಮಾಡುವತನಕ ಏನು ಹೇಳಲು ಆಗಲ್ಲ ಎಂದು ಸುರಪುರ ಶಾಸಕ ರಾಜೂಗೌಡ, ಬೊಮ್ಮಾಯಿ ಸಂಪುಟ ಸೇರುವ ಸುಳಿವು ನೀಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಲೀಕೇಶನ್ ಹಾಕಿದಿವಿ, ಕಾಯುತ್ತ ಕುಂತೀವಿ. ಏನಾಗುತ್ತೆ ನೋಡೋಣ ಎಂದರು.
ಸಿಎಂ ಬೊಮ್ಮಯಿ ಅವರಿಗೆ ಮನವಿ ಮಾಡದ್ದೇನೆ. ಪಕ್ಷದ ರಾಜ್ಯಾಧ್ಯಕ್ಷರು, ಮಾಜಿ ಸಿಂ ಯಡಿಯೂರಪ್ಪನವರು, ಬೊಮ್ಮಾಯಿ ಅವರು ಏನ್ ನಿರ್ಧಾರ ಮಡತಾರ ನೋಡಬೇಕಿದೆ.
ಯಾವ ಭಾಗಕ್ಕೆ ಕೊಟ್ಟರೆ , ? ಯಾರಿಗೆ ಕೊಟ್ಟರ ?ಒಳ್ಳೆಯದಾಗುವುದು ಎಂದು ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುವುದಾಗಿ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಯಿ ನನಗೆ ದೊಡ್ಡ ಅಣ್ಣ ಇದ್ದ ಹಾಗೆ. ರಾಜಕೀಯವಾಗಿ ಮಾರ್ಗದರ್ಶನ ನೀಡುತ್ತಾರೆ. ಕಷ್ಟ ಸುಖದಲ್ಲಿ ಭಾಗಿಯಾಗಿದ್ದಾರೆ. ಪ್ರಾಂತವಾರು ಸಮಸ್ಯೆಗಳನ್ನು ಬಗೆಹರಿಸಿ ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮೈಸೂರು ಭಾಗದಲ್ಲಿ ಯಾರಿಗೂ ಅನ್ಯಾಯವಾಗದಂತೆ ಸಚಿವ ಸ್ಥಾನ ನೀಡಲಿ ಎಂಬುದು ನನ್ನ ಬೇಡಿಕೆ ಎಂದು ಶಾಸಕ ರಾಜುಗೌಡ ಹೇಳಿದರು.
ಬಸವರಾಜ ಬೊಮ್ಮಯಿ ಅವರಿಗೆ ಆಡಳಿತ ನಡೆಸದೊ ಗೊತ್ತಿದೆ. ಜೆ.ಎಚ್. ಪಟೇಲರು ಮುಖ್ಯ ಮಂತ್ರಿಯಿದ್ದಾಗ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಜಲಸಂಪನ್ಮೂಲ ಖಾತೆ, ಹೋಂ ಮಿನಿಸ್ಟರ್ , ಲಾ ಮಿನಿಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಆಡಳಿತದ ಬಗ್ಗೆ ಸಂಪೂರ್ಣ ತಿಳಿವಳಿಕೆ ಇದೆ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ 150 ಕ್ಕೂ ಹೆಚ್ಚು ಸೀಟ್ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.
ಜಗದೀಶ ಶೆಟ್ಟರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ರಾಜೂಗೌಡ, ಬಸವರಾಜ ಬೊಮ್ಮಯಿ ಯುವಕರು. ನಾನು ಮಂತ್ರಿಯಾಗಲ್ಲ ಎಂದು ಅವರೇ ಸ್ಥಾನ ಬಿಟ್ಕೊಟ್ಟಿದ್ದಾರೆಯೇ ಹೊರತು, ಯಾವುದೇ ಅಸಮಾಧಾನ ಇಲ್ಲ ಎಂದು ಸಮರ್ಥಿಸಿಕೊಂಡರು