HomeGadag Newsಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಇಬ್ಬರು ಮುಸ್ಲಿಂ ಅಭ್ಯರ್ಥಿ ಸೇರಿ 30 ವಾರ್ಡ್ ಗೆ ಅಭ್ಯರ್ಥಿಗಳ...

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಇಬ್ಬರು ಮುಸ್ಲಿಂ ಅಭ್ಯರ್ಥಿ ಸೇರಿ 30 ವಾರ್ಡ್ ಗೆ ಅಭ್ಯರ್ಥಿಗಳ ಆಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಅವಳಿ ನಗರದ 35 ವಾರ್ಡ್ಗಳಲ್ಲಿ 30 ವಾರ್ಡ್ಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಶನಿವಾರ ಸಂಜೆ ತನ್ನ ಕೋರ್ ಕಮೀಟಿ ಸಭೆಯಲ್ಲಿ ಘೋಷಿಸಿದೆ.

ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್, ಶಾಸಕ ಕಳಕಪ್ಪ ಬಂಡಿ, ಮುಖಂಡ ಅನಿಲ್ ಮೆನಸಿನಕಾಯಿ, ಶ್ರೀಪತಿ ಉಡುಪಿ, ಶ್ರೀಕಾಂತ್ ಖಟವಣೆ, ಎಂ.ಎಸ್.ಕರಿಗೌಡ್ರ, ಕಾಂತಿಲಾಲ್ ಬನ್ಸಾಲಿ, ಸಂಗಮೇಶ್ ದುಂದೂರ ಸೇರಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ಬಾರಿ ವಿಶೇಷವೇನೆಂದರೆ ಘೋಷಿಸಿದ ಮೂವತ್ತು ಅಭ್ಯರ್ಥಿಗಳಲ್ಲಿ ಇಬ್ಬರು ಮುಸ್ಲಿಂ ಅಭ್ಯರ್ಥಿಗಳಿರುವುದು ಗಮನಾರ್ಹ.

ಘೋಷಿಸಿದ ವಾರ್ಡ್ಗಳ ಪೈಕಿ 03, 22, 28, 32 ಹಾಗೂ 33ನೇ ವಾರ್ಡ್ಗಳಿಗೆ ಇನ್ನು ಅಭ್ಯರ್ಥಿಗಳ ಘೋಷಿಸಿಲ್ಲ. ಘೋಷಿಸಿದ ಅಭ್ಯರ್ಥಿಗಳಲ್ಲಿ ಕೊನೆಘಳಿಗೆಯಲ್ಲಿ ಬದಲಾವಣೆಯಾದರೂ ಅಚ್ಚರಿ ಪಡುವಂತಿಲ್ಲ. ಇನ್ನು ತೀವ್ರ ಪೈಪೋಟಿ ಇರುವ ಐದು ವಾರ್ಡ್ ಗಳಲ್ಲಿ ಇನ್ನೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ ಎನ್ನಲಾಗಿದೆ.

ವಾರ್ಡ್ ಸಮೇತ ವಿವರ

ವಾರ್ಡ್ ನಂ. 1)ಸೈನಾಜ್ ಶಾಮೀದಸಾಬ್ ನರಗುಂದ, ವಾರ್ಡ್ ನಂ.2-ರಾಜೇಶ್ ಮುತಗಾರ, ವಾರ್ಡ್ ನಂ.4)ಗ್ರೇಶಿಯಾ (ದೀಪಾ) ಮಂಜುನಾಥ್ ಪೂಜಾರ, ವಾರ್ಡ್ ನಂ. 5)ಶಶಿಕಲಾ ಶ್ಯಾವಿ, ವಾರ್ಡ್ ನಂ. 6) ರೇಖಾ ಹನಮಂತಪ್ಪ ಅಳವಂಡಿ, ವಾರ್ಡ್ ನಂ.7)ರಾಘವೇಂದ್ರ ಯಳವತ್ತಿ,

ವಾರ್ಡ್ ನಂ. 8)ನಿರ್ಮಲ ದಶರತ್ ಕೊಳ್ಳಿ, ವಾರ್ಡ್ ನಂ. 9) ಶಿವು ಹಿರೇಮನಿಪಾಟೀಲ, ವಾರ್ಡ್ ನಂ.10 ಮಾದವ ಗಣಾಚಾರಿ,

ವಾರ್ಡ್ ನಂ. 11) ಶ್ವೇತಾ ಬೆನಕನವಾರಿ, ವಾರ್ಡ್ ನಂ.12)ವಿಜಯಲಕ್ಷ್ಮಿ ಶಶಿಧರ ದಿಂಡೂರ,

ವಾರ್ಡ್ ನಂ. 13)ಮುತ್ತು (ಗೂಳಪ್ಪ) ಮುಶಿಗೇರಿ, ವಾರ್ಡ್ ನಂ. 14) ಪ್ರಕಾಶ್ ಅಂಗಡಿ, ವಾರ್ಡ್ ನಂ. 15) ಚಂದ್ರು ತಡಸದ, ವಾರ್ಡ್ ನಂ. 16) ಲಕ್ಷ್ಮಣ ದೊಡ್ಡಮನಿ, ವಾರ್ಡ್ ನಂ. 17) ಕೌಸರ್ ನಿಶಾರ್ ನಮಾಜಿ, ವಾರ್ಡ್ ನಂ. 18) ಕಿಶನ್ ಮೆಹರವಾಡೆ,

ವಾರ್ಡ್ ನಂ. 19)ಮಹಾಂತೇಶ್ ನಲವಡಿ, ವಾರ್ಡ್ ನಂ. 20) ಕಮಲಾಕ್ಷಿ ಗೊಂದಿ, ವಾರ್ಡ್ ನಂ. 21) ಶಂಕರ್ ಕರಿಬಿಷ್ಠಿ,

ವಾರ್ಡ್ ನಂ. 23)ಚನ್ನಪ್ಪ ದ್ಯಾಂಪೂರ, ವಾರ್ಡ್ ನಂ. 24) ನಾಗರಾಜ್ ಹುಲಗಪ್ಪ ತಳವಾರ, ವಾರ್ಡ್ ನಂ. 25) ಬಾಬಣ್ಣ ಮಾನ್ವಿ, ವಾರ್ಡ್ ನಂ. 26) ಹುಲಿಗೆಮ್ಮ ಜಿ ಹಬೀಬ, ವಾರ್ಡ್ ನಂ.  27) ಶಾರದಾ ಹೀರೆಮಠ,

ವಾರ್ಡ್ ನಂ. 29) ರಾಜೇಶ್ ಕಟ್ಟಿಮನಿ, ವಾರ್ಡ್ ನಂ. 30) ರೇಖಾ ಅಮರನಾಥ ಬೆಟಗೇರಿ, ವಾರ್ಡ್ ನಂ.31) ಶೈಲಾ ಬಾಕಳೆ, ವಾರ್ಡ್ ನಂ. 34) ವಿದ್ಯಾವತಿ ಗಡಗಿ, ಹಾಗೂ ವಾರ್ಡ್ ನಂ 35)ಉಷಾ ಮಹೇಶ್ ದಾಸರ್


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!