ಮನೆ ಕಡೆ ಬರಬೇಡ ಅಂತ ತಾಕೀತು ಮಾಡಿದವನ ಕೊಲೆಗೆ ಯತ್ನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಮತ್ತೆ ಮನೆ ಕಡೆ ಬರಬೇಡ ಎಂದು ತಾಕೀತು ಮಾಡಿದ ವ್ಯಕ್ತಿಗೆ ಕಂದ್ಲಿಯಿಂದ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ಮುಂಡರಗಿ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದ ಮೈಲಾರಪ್ಪನ ಪತ್ನಿ ಹಾಗೂ ಅದೇ ಗ್ರಾಮದ ಗಾಳೆಪ್ಪ ಕಟಗಿ ನಡುವೆ ಅನೈತಿಕ ಸಂಬಂಧ ಇತ್ತು. ಎಷ್ಟೋ ಸಲ ಇಬ್ಬರಿಗೂ ಬುದ್ದಿ ಮಾತು ಹೇಳಿದರೂ ಕೇಳಿರಲಿಲ್ಲ.

ಇತ್ತೀಚೆಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಇದರಿಂದಾಗಿ ಕೆರಳಿದ ಮೈಲಾರಪ್ಪ ಪತ್ನಿಗೆ ಥಳಿಸಿ ಗಾಳೆಪ್ಪನಿಗೆ ಮತ್ತೊಮ್ಮೆ ತನ್ನ ಮನೆಯ ಕಡೆಗೆ ಬಾರದಂತೆ ತಾಕೀತು ಮಾಡಿದ್ದ. ಇದರಿಂದ ಕೋಪಗೊಂಡ ಗಾಳೆಪ್ಪ, ಮೈಲಾರಪ್ಪ ತನ್ನ ಮನೆಯಲ್ಲಿ ಮಲಗಿದ್ದಾಗ ಕಂದ್ಲಿಯಿಂದ ಕುತ್ತಿಗೆ ಹಾಗೂ ತಲೆಗೆ ಚುಚ್ಚಿ
ಮಾರಣಾಂತಿಕ ಹಲ್ಲೆ ನಡೆಸಿದ ಪರಾರಿಯಾಗಿದ್ದ.

ಗಾಯಗೊಂಡ ಮೈಲಾರಪ್ಪನನ್ನು ಮನೆಯವರು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಯನ್ನು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊಡಸಿದ್ದರು.

ಈ ಕುರಿತು ಮೈಲಾರಪ್ಪನ ಸಹೋದರನ ಮಗ ಸರೆಪ್ಪ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here