ಬಿಎಸ್‌ವೈ ಭೇಟಿ ಮಾಡಿದ್ದು ಸಾಬೀತಾದರೆ ರಾಜಕೀಯ ಸನ್ಯಾಸ: ಸಿದ್ದು

0
Spread the love

ವಿಜಯಸಾಕ್ಷಿ ಸುದ್ದಿ, ಕಲಬುರಗಿ

Advertisement

ಯಡಿಯೂರಪ್ಪರನ್ನು ಅವರ ಹುಟ್ಟುಹಬ್ಬದ ವೇಳೆ ಭೇಟಿ ಮಾಡಿದ್ದೆ. ನಂತರ ಭೇಟಿ ಮಾಡಿಯೇ ಇಲ್ಲ. ಭೇಟಿ ಮಾಡಿದ್ದು ಪ್ರೂವ್ ಮಾಡಿದ್ರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನಾಗಿದ್ದಾಗಲೇ ಸಿಎಂ ಭೇಟಿ ಮಾಡಿಲ್ಲ. ಸಭೆ, ಸದನದಲ್ಲಿ ಭೇಟಿ ಬಿಟ್ಟರೆ ವೈಯಕ್ತಿಕವಾಗಿ ಯಡಿಯೂರಪ್ಪರನ್ನು ಭೇಟಿ ಮಾಡಿಯೇ ಇಲ್ಲ.

ನಾನು ತಾಲೂಕು ಬೋರ್ಡ್ ಮೆಂಬರ್ ಆಗಿದ್ದಾಗಲೇ ವಿರೋಧ ಪಕ್ಷದ ನಾಯಕನಾಗಿದ್ದೆ. ಆಗಲೂ ಸಹ ಅಧಿಕಾರದಲ್ಲಿದ್ದ ವರನ್ನು ಭೇಟಿ ಮಾಡಿಲ್ಲ. ಇದು ರಾಜಕೀಯದಲ್ಲಿ ನನ್ನ ತತ್ವ ಸಿದ್ಧಾಂತ. ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು ಎಂದು ಹೇಳಿದರು.

ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರಲ್ಲ ಅದು ಏನು ?
ಆಗ ಕುಮಾರಸ್ವಾಮಿ ಸನ್ಯಾಸಿ ಆಗಲಿಕ್ಕೆ ಹೋಗಿದ್ರಾ
ಪಕ್ಷದ ಹೆಸರು ಜೆಡಿಎಸ್, ಸರ್ಕಾರ ಮಾಡಿದ್ದು ಕೋಮುವಾದಿ ಬಿಜೆಪಿ ಅವರ ಬಳಿ ಸನ್ಯಾಸತ್ವ ತಗೋಲಿಕ್ಕೆ ಹೋಗಿದ್ರಾ ಅಂತವರಿಂದ ಪಾಠ ಕಲಿಯಬೇಕಾಗಿ ಬಂದಿರೋದು ನಮ್ಮ ದುಃಸ್ಥಿತಿ ಎಂದರು.

ಪ್ರಧಾನಿ ಬಿಜೆಪಿಯವರು, ಯಡಿಯೂರಪ್ಪ ಸಹ ಬಿಜೆಪಿಯಲ್ಲಿದ್ದಾರೆ. ನನ್ನ ಮಾತು ಕೇಳಿ ಐಟಿ ರೇಡ್ ಮಾಡ್ತಾರಾ ಎಂದು ಪ್ರಶ್ನಿಸಿದರು.


Spread the love

LEAVE A REPLY

Please enter your comment!
Please enter your name here