ಆನಂದಸ್ವಾಮಿರನ್ನು ಬೆಂಬಲಿಸಿ ಬೀದಿ ಬದಿ ವ್ಯಾಪಾರಸ್ಥರ ಸಭೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ವೀರೇಶ್ವರ ಗ್ರಂಥಾಲಯದ ಹತ್ತಿರವಿರುವ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ಜಾಗದಲ್ಲಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರನ್ನು ಬೆಂಬಲಿಸಿ ಸಭೆ ಆಯೋಜಿಸಲಾಗಿತ್ತು.

Advertisement

ಕಾಂಗ್ರೆಸ್ ಯುವ ಮುಖಂಡ ಕೃಷ್ಣಗೌಡ ಪಾಟೀಲ ಮಾತನಾಡಿ, ಮತದಾರರು ಜಾಗೃತರಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಬಯಸಿದ್ದಾರೆ ಎಂದು ಹೇಳಿದರು. ಸಂಘದ ಪ್ರಧಾನ ಕಾರ್ಯದರ್ಶಿ ಭಾಷಾಸಾಬ ಮಲ್ಲಸಮುದ್ರ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಮಾರುತಿ ಸೋಳಂಕಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಇರ್ಫಾನ ಡಂಬಳ, ಚಂದ್ರಕಾಂತ ಚವ್ಹಾಣ, ಮಕ್ತುಂಸಾಬ ನಾಲಬಂದ, ರಶೀದಾ ಬಾ. ನದಾಫ, ರೇಣುಕಾ ಹತ್ತಿವಾಲೆ, ಶ್ರೀನಿವಾಸ ಹೆನ್ನೂರು, ಎಸ್.ಎನ್. ಬಳ್ಳಾರಿ, ಅಬ್ಬು ಹುಯಿಲಗೋಳ, ಕಳಕಪ್ಪ ಪೋತಾ, ಆನಂದ ಕೋಳಿ, ಭೀಮಣ್ಣ ಕೋಳಿ, ಮಂಜುನಾಥ, ಬಸುರಾಜ ತಾವರೆ, ಹನಮಂತಪ್ಪ, ಶಿವಕುಮಾರ, ಫಾರೂಕ ಹುಬ್ಬಳ್ಳಿ, ಅಬ್ಬು ರಾಟಿ, ಶಿವಕುಮಾರ ಬಳ್ಳಾರಿ ಮುಂತಾದವರು ಪಾಲ್ಗೊಂಡಿದ್ದರು.

ಮಹಮ್ಮದಅಲಿ ಅತ್ತಾರ, ಮಾಬುಲಿ ಧಾರವಾಡ, ರಾಜು ರೋಣದ, ಮಂಜುನಾಥ ಕುರ್ತಕೋಟಿ, ಕುತ್ತೇಜಾ ದೊಡ್ಡಮನಿ, ದಾದು ಮುಂಡರಗಿ, ಮೆಹಬೂಬ ಹಣಗಿ ಹಾಜರಿದ್ದರು. ನವೀನ ಭಂಡಾರಿ ನಿರೂಪಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here