ಬಿಹಾರದ ಸರನ್ ಜಿಲ್ಲೆಯಲ್ಲಿ ತ್ರಿವಳಿ ಕೊಲೆ ನಡೆದಿದೆ, ಹುಚ್ಚು ಪ್ರೇಮಿಯೊಬ್ಬ ಪ್ರೇಯಸಿ ಹಾಗೂ ಆಕೆಯ ಸಹೋದರಿ, ತಂದೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ತಾರಕೇಶ್ವರ್ ಅವರ ಇಬ್ಬರು ಹೆಣ್ಣುಮಕ್ಕಳಾದ ಚಾಂದಿನಿ ಕುಮಾರಿ ಹಾಗೂ ಅಭಾ ಕುಮಾರಿ ಹಾಗೂ ಪತ್ನಿ ಎಲ್ಲರೂ ಮನೆಯಲ್ಲಿ ಮಲಗಿದ್ದರು.
ಆಗ ಮೂವರ ಕತ್ತು ಸೀಳಿ ಕೊಲೆ ಮಾಡಿದ್ದ ಆರೋಪಿ ತಾರಕೇಶ್ವರ್ ಪತ್ನಿಯನ್ನು ಕೊಲ್ಲಲು ಬಂದಾಗ ಅವರಿಗೆ ಎಚ್ಚರವಾಗಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಆರೋಪಿ ಪ್ರೇಯಸಿಯ ತಾಯಿಯ ಭುಜದ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕೊಲೆಯ ಹಿಂದೆ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ತಾರಕೇಶ್ವರ್ ಪತ್ನಿ ಶೋಭಾ ದೇವಿಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಅನುಮಾನದ ಮೇಲೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮನೆಯವರೆಲ್ಲರೂ ತಾರಸಿಯ ಮೇಲೆ ಮಲಗಿದ್ದರು, ಇಬ್ಬರು ಆರೋಪಿಗಳು ಬಂದು ಹರಿತವಾದ ಆಯುಧದಿಂದ ಒಬ್ಬರಾದ ಮೇಲೆ ಒಬ್ಬರ ಕತ್ತನ್ನು ಸೀಳಿ ಕೊಲೆ ಮಾಡಿದ್ದಾರೆ.