ಹುಬ್ಬಳ್ಳಿ: ಇಡಿ ಅಧಿಕಾರಿಗಳ ಒತ್ತಡ ಹಾಕುತ್ತಾರೆ ಅನ್ನೋದು ಕೂಡ ವಿತಂಡವಾದ. ಸಿದ್ದರಾಮಯ್ಯ ಹೇಳಿದ್ದು ಎಲ್ಲ ನಂಬಬೇಕಾ? ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳ ಒತ್ತಡ ಹಾಕುತ್ತಾರೆ ಅನ್ನೋದು ಕೂಡ ವಿತಂಡವಾದ.
Advertisement
ಸಿದ್ದರಾಮಯ್ಯ ಹೇಳಿದ್ದು ಎಲ್ಲ ನಂಬಬೇಕಾ? ಎಲ್ಲ ಪ್ರಕರಣವನ್ನು ಸಿಬಿಐಗೆ ಕೊಡಿ. ಏನೋ ಇದೆ ಎಂದು ಕಾಗದದ ಹುಲಿ ಅಂತೆ ಹೆದರಿಸುತ್ತಿದ್ದಾರೆ. ಯಾವ ಸಾವಿರಾರು ಕೋಟಿ ರೂ. ಹಣ ನೀವು ಫೈನಾನ್ಸ್ ಮಿನಿಸ್ಟರ್, 15 ಬಜೆಟ್ ಮಂಡನೆ ಮಾಡಿದ್ದೀರಿ. ಸರಿಯಾಗಿ ಹೇಳಬೇಕಲ್ಲ. ಈ ಸರ್ಕಾರದ ಮೇಲೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ಇದಾರೆ. ಸರ್ಕಾರದಲ್ಲಿ ಹಣವೇ ಇಲ್ಲ ಎಂದು ಕಿಡಿಕಾರಿದ್ದಾರೆ.