ವಿಜಯಪುರ: ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾದವನ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು,
Advertisement
ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾದವನ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗದು ಎಂದರು. ವಿಷಯಗಳನ್ನು ತಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಮಾಡಿದ್ದು ಅವರು ಸ್ವಲ್ಪ ಸಮಯದ ನಂತರ ಎಲ್ಲವನ್ನೂ ಸರಿ ಮಾಡುವ ಮತ್ತು ಪಕ್ಷದ ಹಳಬರಿಗೆ ಹಾಗೂ ಪ್ರಾಮಾಣಿಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಯತ್ನಾಳ್ ಹೇಳಿದರು.
ಸಂಘದ ಪ್ರಮುಖರು ಸಹ ರಾಜ್ಯದಲ್ಲಿ ಬಿಜೆಪಿಯನ್ನು ಹೊಂದಾಣಿಕೆ ಮುಕ್ತ ಮಾಡುವುದಾಗಿ ಎಂದಿದ್ದು, ತಾನು ಕೆಲ ದಿನಗಳವರೆಗೆ ತಾಳ್ಮೆಯಿಂದ ಇರಬೇಕು ಅಂತ ಹೇಳಿದ್ದಾರೆ ಎಂದ ಯತ್ನಾಳ್ ಪಕ್ಷದ ಮತ್ತು ಸಂಘದ ವರಿಷ್ಠರು ಹೇಳಿರುವುದನ್ನು ತಾನು ಪಾಲಿಸುವುದಾಗಿ ಹೇಳಿದರು.