ವಿಜಯಸಾಕ್ಷಿ ಸುದ್ದಿ, ಗದಗ : ಮಣಕವಾಡದ ಮಹಿಮಾ ಪುರುಷ ಶ್ರೀ ಗುರು ಮೃತ್ಯುಂಜಯ ಮಹಾಸ್ವಾಮಿಗಳ ಸ್ಮರಣೋತ್ಸವ ಮಾಲಿಕೆ-131 ಕಾರ್ಯಕ್ರಮ ನಗರದ ಲಖಾಣಿ ಆಸ್ಪತ್ರೆ ಎದುರುಗಿನ ಶ್ರೀ ಗುರು ಮೃತ್ಯುಂಜಯ ಗುರುಕುಲ ಆಶ್ರಮದ ಸಭಾಭವನದಲ್ಲಿ ಆಗಸ್ಟ್ 25ರ 10-30ಕ್ಕೆ ಜರುಗಲಿದೆ. ಹಿರಿಯ ಸಾಹಿತಿ, ಸೌಹಾರ್ದ ಮಹಾಮನೆ ವೇದಿಕೆ ಅಧ್ಯಕ್ಷರಾದ ಐ.ಕೆ. ಕಮ್ಮಾರ ಸಮಾರಂಭದ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯ ಕಾರ್ಯದರ್ಶಿ, ಸಾಹಿತಿಗಳಾದ ಶಿವನಗೌಡ ಗೌಡರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವೈಜನಾಥ ವೀರಪ್ಪ ಕೌತಾಳ ಹಾಗೂ ಕುಟುಂಬದವರು ಭಕ್ತಿ ಸೇವೆಯನ್ನು ವಹಿಸಿಕೊಳ್ಳುವರು. ರಂಗ ಕಲೆಯಲ್ಲಿ ಸುಮಾರು 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಿಯದರ್ಶಿನಿ ಹಿರಿಯೂರ ಅವರಿಗೆ ಶ್ರೀ ಗುರುಮೃತ್ಯುಂಜಯ ಸೇವಾ ಸಮಿತಿ ಸೌಹಾರ್ದ ಮಹಾಮನೆ ವೇದಿಕೆಯಿಂದ ಈ ಸಂದರ್ಭದಲ್ಲಿ `ರಂಗ ಸಂಜೀವಿನಿ’ ಬಿರುದು ನೀಡಿ ಗೌರವಿಸಲಾಗುವುದು. ನಾಗಾವಿಯ ಹಿರಿಯರಾದ ಮೃತ್ಯುಂಜಯ ಹಟ್ಟಿ, ಎನ್.ಎಸ್. ಕುರಿ, ಸಂಭಾಪೂರದ ರಾಯಪ್ಪಜ್ಜ ನಾಗನೂರ, ಹಿರೇಹಂದಿಗೋಳದ ಶಿವಶಂಕ್ರಪ್ಪ ಆರಟ್ಟಿ, ರಾಜಣಸಾ ಕಲಬುರ್ಗಿ, ಶಿವಣ್ಣ ಒಡೆಯರ, ವನಮಾಲಾ ಮಾನಶೆಟ್ಟಿ, ಇಂದಿರಾ ಆಸಂಗಿ ಉಪಸ್ಥಿತರಿರುವರು.
ಅನರ್ಘ್ಯ ಸಂಗೀತ ಪಾಠಶಾಲೆಯ ಮೇಘಾ ಗಿಡ್ನಂದಿ ಇವರಿಂದ ಸಂಗೀತ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜ್ಯ ಮೃತ್ಯುಂಜಯ ಅಪ್ಪನ ಕೃಪೆಗೆ ಪಾತ್ರರಾಗಲು ಆಶ್ರಮದ ವಿದ್ಯಾರ್ಥಿಗಳಾದ ಆಲಮ್, ಅಸ್ಲಮ್, ಅಕ್ರಮ್, ಸ್ನೇಹಾ ಬಡಿಗೇರ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.