ಜೈಲಿಂದಲೇ ಹೆಂಡತಿಗೆ ದರ್ಶನ್ ದಿಢೀರ್ ಕರೆ: ನಾಳೆಯೇ ಭೇಟಿಗೆ ಬರುವಂತೆ ಮನವಿ!

0
Spread the love

ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸೇರಿ ಆರೋಪಿಗಳ ವಿರುದ್ಧ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

Advertisement

ಇನ್ನೂ ಚಾರ್ಜ್ ಶೀಟ್ ನೋಡಿ ಡಿಸ್ಟರ್ಬ್ ಆಗಿರುವ ದರ್ಶನ್ ಅವರು ಇಂದು ತಮ್ಮ ಹೆಂಡತಿಗೆ ಜೈಲಿನಿಂದಲೇ ಕರೆ ಮಾಡಿ ನಾಳೆ ಭೇಟಿ ಆಗುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ನಟಿ ಪವಿತ್ರಾಗೌಡ ಅವರನ್ನು ಮೆಚ್ಚಿಸಲು ನಟ ದರ್ಶನ್ ರೇಣುಕಾಸ್ವಾಮಿ ಜೀವ ತೆಗೆದರು ಎನ್ನುವ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ನಟ ದರ್ಶನ್​ಗೆ ಪವಿತ್ರಾಗೌಡ ಬ್ಲಾಕ್​ಮೇಲ್​ ಮಾಡಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ.

ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾದ ವಿಚಾರಗಳು ಎಲ್ಲೆಡೆ ವೈರಲ್​ ಆದ ಬೆನ್ನಲ್ಲೇ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಐದು ನಿಮಿಷಗಳ ಕಾಲ ಮಾತಾಡಿದ್ದಾರೆ. ಪತ್ನಿ ಜೊತೆ ಮಾತಾಡುವಾಗ ದರ್ಶನ್ ಭಾವುಕರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ನಾಳೆ ಜೈಲಿಗೆ ಬರುವಂತೆ ದರ್ಶನ್‌ ಪತ್ನಿಗೆ ತಿಳಿಸಿದ್ದಾರೆ. ಈ ಬಗ್ಗೆ ಜೈಲಾಧಿಕಾರಿಗಳಿಗೂ ದರ್ಶನ್ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಾಳೆ ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ತಾಯಿ ಮೀನಾ ಬರಲಿದ್ದಾರೆಂಬ ಮಾಹಿತಿ ಸಿಕ್ಕಿದೆ. ಇನ್ನೂ ಗಂಡನ ರಕ್ಷಣೆಗಾಗಿ ಪತ್ನಿ ವಿಜಯಲಕ್ಷ್ಮಿ ಶಕ್ತಿದೇವತೆಗಳ ಮೊರೆ ಹೋಗ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here