ಗದಗ: ನಾಗಮಂಗಲ ಗಲಾಟೆ ಪ್ರಕರಣದಲ್ಲಿ ಕೇರಳ ನಂಟು ವಿಚಾರಕ್ಕೆ ಸಂಬಂಧಿಸಿದಂತೆ NIA ತನಿಖೆಗೆ ಒಳಪಡಿಸಿದ್ರೆ ಸತ್ಯ ಹೊರ ಬರುತ್ತೆ ಎಂದು ಗದಗನಲ್ಲಿ NIA ತನಿಖೆಗೆ ಒಪ್ಪಿಸುವಂತೆ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಒತ್ತಾಯ ಮಾಡಿದ್ದಾರೆ.
ಇಬ್ಬರು ಕೇರಳ ಮೂಲದ ದುಷ್ಕರ್ಮಿಗಳ ಕೈವಾಡ ಇದೆ ಗೊತ್ತಾಗಿದೆ. ತನಿಖೆ ಮಾಡಿದಾಗ ಸತ್ಯಾಂಶ ಹೊರಬರಲಿದೆ. ದುಷ್ಕರ್ಮಿಗಳು ಯಾವ ಸಂಘಟನೆಗೆ ಸಂಬಂಧಪಟ್ಟವ್ರು ಮಾಡಿಕೊಂಡು ಬಂದಿದ್ದಾರೆ ಎಂದು ಗೊತ್ತಾಗಲಿದೆ ಎಂದರು.
ಇನ್ನೂ ರಾಜ್ಯದಲ್ಲೇ ಇದೇ ಮೊದಲಲ್ಲ. ಕೇಫೆ ಮೇಲೆ ಬಾಂಬ್ ಹಾಕಿದ್ದಾರೆ.. ಕೇರಳ ಮೂಲದ ದುಷ್ಕರ್ಮಿಗಳನ್ನು ಬಂಧಿಸಿ ವಿಚಾರಣೆ ಮಾಡಬೇಕು. ಅವ್ರ ಜೊತೆ ಯಾರಿದ್ದಾರೆ. ನಮ್ಮ ರಾಜ್ಯದ ರಾಜಕಾರಣಿಗಳು ಇದ್ದಾರೋ ಮತ್ಯಾರಿದ್ದಾರೋ ಎಂದು NIA ತನಿಖೆಗೆ ವಹಿಸಿದಾಗ ಸತ್ಯಾಂಶ ಹೊರಬರುವ ಸಾಧ್ಯತೆ ಇದೆ ಎಂದರು.
ಮುಸ್ಲಿಂ ಬಾಂಧವರು ಗಣೇಶ ಪೂಜೆ ಮಾಡಿದ್ದು ನೋಡಿದ್ದೇವೆ ಆದ್ರೆ ಅಂದಿನ ಘಟನೆ ನೋಡಿದ್ರೆ ಪ್ಲ್ಯಾನ್ ಮಾಡಿದ ಗಲಾಟೆಯಾಗಿದ್ದು, ಲಾಂಗು, ಕಲ್ಲು ನೋಡಿದ್ರೆ ಹಿಂದೂಗಳ ಮೇಲೆ ದೌರ್ಜನ್ಯ ಮಾಡಲು ಪ್ಲಾನ್ ಮಾಡಿರಬಹುದು ಎಂದು ಹೇಳಿದರು.