Homecultureಗಣೇಶನ ವಿಸರ್ಜನೆ ಮಾದರಿಯಾಗಿರಲಿ : ಮಂಜನಗೌಡ ಕೆಂಚನಗೌಡ್ರ

ಗಣೇಶನ ವಿಸರ್ಜನೆ ಮಾದರಿಯಾಗಿರಲಿ : ಮಂಜನಗೌಡ ಕೆಂಚನಗೌಡ್ರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಗಣೇಶ ವಿಸರ್ಜನೆ ಕಾರ್ಯದಲ್ಲಿ ಅತಿಯಾದ ಸಿಡಿಮದ್ದುಗಳ ಬಳಕೆ, ಡಿಜೆಯ ಅಬ್ಬರದ ಶಬ್ಧ ಮಾಲಿನ್ಯಗಳಿಂದ ಪರಿಸಕ್ಕೆ ಹಾನಿಯಾಗಲಿದ್ದು, ಸಂಪ್ರದಾಯಬದ್ಧವಾಗಿ ವಿಸರ್ಜನೆ ಕಾರ್ಯಕ್ರಮ ನಡೆಸಿದರೆ ಎಲ್ಲರಿಗೂ ಮಾದರಿಯಾಗುತ್ತದೆ ಎಂದು ಗೋವನಾಳ ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜನಗೌಡ ಕೆಂಚನಗೌಡ್ರ ಹೇಳಿದರು.

ಅವರು ಗೋವನಾಳ ಗ್ರಾಮದ ಸ್ನೇಹಲೋಕ ಯುವಕ ಮಂಡಳ ವತಿಯಿಂದ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಷಣ್ಮುಖಯ್ಯ ಗಡ್ಡದೇವರಮಠ, ಸ್ನೇಹಲೋಕ ಯುವಕ ಮಂಡಳದ ಅಧ್ಯಕ್ಷ ನಿಂಗನಗೌಡ ಮಣಕಟ್ಟಿ, ಮಲ್ಲಯ್ಯ ಹಿರೇಮಠ, ಬಸವರಾಜ್ ಮಲ್ಲೂರ, ನವೀನ್ ಕೊರಡೂರ, ಶಿವನಗೌಡ ಮಣಕಟ್ಟಿ, ದೀಪು ಹೊಸಮನಿ, ಧರ್ಮರಾಜ್ ಹಿತ್ತಲಮನಿ, ಲೋಹಿತ್ ಅಗಡಿ, ಸಂತೋಷ ಮೂತೆನವರ, ಸುರೇಶ್, ಶ್ರೀಕಾಂತ ಕೊರಡೂರ, ಷಣ್ಮುಖ ಕೊರಡೂರ, ನಿಂಗನಗೌಡ್ರು ಸಣ್ಣಗೌಡ್ರ ಸೇರಿದಂತೆ ಸ್ನೇಹಲೋಕ ಯುವಕ ಮಂಡಲ ಸದಸ್ಯರು, ಗ್ರಾಮಸ್ಥರು ಇದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!