ಧಾರವಾಡದ ಚೇತನ ಫೌಂಡೇಶನ್ ಕರ್ನಾಟಕ ವತಿಯಿಂದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಇತ್ತೀಚೆಗೆ ಜರುಗಿದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಂಡರಗಿಯ ಈಶ್ವರಿ ಮಹಿಳಾ ಫೌಂಡೇಶನ್ ಅಧ್ಯಕ್ಷರಾದ ಪ್ರಭಾವತಿ ಬೆಳವಣಕಿಮಠ, ಮದರ ತೇರೆಸಾ ಮಹಿಳಾ ಟ್ರಸ್ಟ್ನ ಸಂಸ್ಥಾಪಕಿ ಮಂಜುಳಾ ಇಟಗಿ, ಕೋಟೆ ಶಾಲೆ ದೈಹಿಕ ಶಿಕ್ಷಕಿ ಶಾಂತಾ ಇಮರಾಪೂರ ಅವರ ಸಾಧನೆ ಗುರುತಿಸಿ ಅವರಿಗೆ ಸಾವಿತ್ರಿ ಫುಲೆ ರಾಷ್ಟ್ರೀಯ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.