ಗದಗ:- ಇಂದು ಗದಗ ಜಿಲ್ಲಾಡಳಿತ ಭವನದಲ್ಲಿ ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗಣಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಕಂಡು ಬಂದಿದೆ.
Advertisement
ಕೆಡಿಪಿ ಮೀಟಿಂಗ್ ನಲ್ಲಿ ಸಭೆಯ ಅರಿವೇ ಇಲ್ಲದಂತೆ ಗಣಿ ಇಲಾಖೆ ಅಧಿಕಾರಿ ವರ್ತಿಸಿದ್ದಾರೆ. ಹಲವಾರು ಸಮಸ್ಯೆ ಬಗ್ಗೆ ಸಚಿವರು ಚರ್ಚೆ ಮಾಡುತ್ತಿದ್ದ ವೇಳೆ ಗಣಿ ಇಲಾಖೆ ಅಧಿಕಾರಿ ನಿದ್ರೆಗೆ ಜಾರಿದ್ದಾರೆ.
ನನಗೂ ಕೆಡಿಪಿ ಸಭೆಗೂ ಸಂಬಂಧವಿಲ್ಲ ಎಂದು ಗಣಿ ಇಲಾಖೆ ಅಧಿಕಾರಿ ನಾಗಭೂಷಣ ಹಾಯಾಗಿ ನಿದ್ರೆಗೆ ಜಾರಿದ್ದಾರೆ. ಸಭೆಯಲ್ಲಿ ಕೆಲವು ಅಧಿಕಾರಿಗಳು ಮೊಬೈಲ್ ನಲ್ಲಿ ಬ್ಯುಸಿ ಇದ್ದು, ಇನ್ನು ಗಣಿ ಇಲಾಖೆ ಅಧಿಕಾರಿ ಮಾತ್ರ ತಂಪಾದ ಎಸಿ ಹವಾಗೆ ಹಾಯಾಗಿ ನಿದ್ರೆಗೆ ಜಾರಿದ್ದಾರೆ.
ಜನ್ರ ಸಮಸ್ಯೆ ಬಗ್ಗೆ ಚರ್ಚೆ ನಡೆಯುವ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.