ತಂಗಿ ಜೊತೆ ಲವ್ವಿ-ಡವ್ವಿ ಶುರುಮಾಡಿದ್ದ ಯುವಕನಿಗೆ ಚಾಕು ಇರಿದ ಅಣ್ಣ! ಸಾವು-ಬದುಕಿನ ಮಧ್ಯ ಗಾಯಾಳು ಹೋರಾಟ..!

2
Spread the love

ಗದಗ:- ತಂಗಿ ಜೊತೆ ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದ ಅಣ್ಣನೋರ್ವ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ.

Advertisement

ಗದಗ ನಗರದ ಧೋಬಿ ಘಾಟ್ ಬಳಿ ಅಕ್ಟೋಬರ್ 6 ರಂದು ರಾತ್ರಿ ಘಟನೆ ನಡೆದಿದ್ದು, ಧಾರವಾಡ ಮೂಲದ 25 ವರ್ಷದ ಜಾಫರ್ ಜಮಾದಾರ ಎಂಬ ಯುವಕನ ಹತ್ಯೆಗೆ ಯತ್ನಿಸಲಾಗಿದೆ.

ಚಾಕು ಇರಿದ ಪರಿಣಾಮ, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜಾಫರ್ ನನ್ನು ಸ್ಥಳೀಯರು ತಕ್ಷಣ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸಧ್ಯ ಜಾಫರ್ ಸಾವು ಬದುಕಿನ ಮಧ್ಯ ಹೋರಾಟ ನಡೆಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಜಾಫರ್ ನನ್ನು ರಾತ್ರೋರಾತ್ರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರುಹಾನ್ ಎಂಬ ಯುವಕನ ತಂಗಿಯನ್ನು ಜಾಫರ್ ಪ್ರೀತಿ ಮಾಡಿದ್ದ. ವಿಷಯ ತಿಳಿದ ಅಣ್ಣ, ಆತನನ್ನು ಕರೆಸಿ ಬುದ್ಧಿ ಹೇಳಿದ್ರು ಜಾಫರ್ ಮಾತ್ರ ಪ್ರೀತಿ ಮಾಡೋದು ಬಿಟ್ಟಿರಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಅಣ್ಣ, ಅಕ್ಟೋಬರ್ 6 ರಂದು ರಾತ್ರಿ ಟೀ ಸ್ಟಾಲ್ ಬಳಿ ನಿಂತಿದ್ದ ಜಾಫರ್ ಜೊತೆ ಜಗಳ ಮಾಡಿದ್ದಾನೆ.

ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಜಾಫರ್ ಗೆ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾನೆ. ಕತ್ತು, ಕಿವಿ, ತಲೆಗೆ ತೀವ್ರವಾಗಿ ಇರಿಯಲಾಗಿದೆ.

ಕಳಸಾಪೂರ ಗ್ರಾಮದ ರುಹಾನ್ ನಮಾಜಖಾನ ಹಾಗೂ ದಾದಾಪೀರ್ ಅನ್ವರಸಾಬ ದೊಡ್ಡಮನಿ ಇವರಿಂದ ಕೊಲೆಗೆ ಯತ್ನಿಸಲಾಗಿರುವುದು ತಿಳಿದು ಬಂದಿದೆ. ಪ್ರಮುಖ ಆರೋಪಿ ರುಹಾನ್ ಎಸ್ಕೇಪ್ ಆಗಿದ್ದು, 2ನೇ ಆರೋಪಿ ದಾದಾಪೀರ್ ನನ್ನು ಶಹರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಳಸಾಪೂರ ಗ್ರಾಮದಲ್ಲಿ ಪ್ರೀತಿಯ ಬಲೆಗೆ ಬಿದ್ದು ಜಾಫರ್ ಜಮಾದಾರ ಇದೀಗ ಆಸ್ಪತ್ರೆ ಸೇರುವಂತಾಗಿದೆ. ಸುದ್ದಿ ತಿಳಿದು ಶಹರ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಬಿ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

2 COMMENTS

LEAVE A REPLY

Please enter your comment!
Please enter your name here