ಅಕ್ಟೋಬರ್ 20ರಂದು ಧಾರವಾಡದ ಸಂಪಿಗೆ ನಗರ ಹತ್ತಿರ ರಸ್ತೆ ಅಪಘಾತದಲ್ಲಿ ಕೆಲಗೇರಿ ಗ್ರಾಮದ ರಮೇಶ್ ಹಂಚಿನಮನಿ, ಮರೆವ್ವ ಹಂಚಿನಮನಿ, ಪ್ರಣವ್ ಹಂಚಿನಮನಿ ಮೃತಪಟ್ಟಿದ್ದು, ಇವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಂಗಳವಾರ ಭೇಟಿ ನೀಡಿ, ವಾರಸುದಾರರಿಗೆ 2 ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಣೆ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ಡಿಸಿಪಿ ರವೀಶ, ಆರ್ಟಿಓ ಅಧಿಕಾರಿ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.