ಬೆಂಗಳೂರು: ಕನ್ನಡ ನಮ್ಮ ತಾಯಿ ಭಾಷೆ, ಮನಸಿನ ಭಾಷೆ, ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಬೇಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು,
ಕನ್ನಡಿಗ ಬರೀ ಭಾರತದಲ್ಲಿ ಒಂದಾಗಿಲ್ಲ, ವಿಶ್ವದಲ್ಲೇ ಒಂದಾಗಿದ್ದಾನೆ. ನೀವೆಲ್ಲರೂ ನಮ್ಮ ದೇಶದ ಆಸ್ತಿ. ನೀವೆಲ್ಲಾ ನಿಮ್ಮ ತಂದೆ ತಾಯಿ, ಗೌರವಗಳನ್ನು ಉಳಿಸಿಕೊಂಡು ಹೋಗ್ತಿರೋ ಹಾಗೆ. ಕನ್ನಡ ನಾಡು ನುಡಿ ಗೌರವ ವನ್ನು ಉಳಿಸಿಕೊಂಡು ಹೋಗಬೇಕು ಎಂದರು. ಇನ್ನೂ ಈ ವರ್ಷ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವರ್ಷದಿಂದ ಕಡ್ಡಾಯವಾಗಿ ಎಲ್ಲಾ ಸಂಸ್ಥೆಗಳಲ್ಲಿ ಕನ್ನಡ ಬಾವುಟ ಹಾರಿಸಬೇಕು ಅಂತ ಸರ್ಕಾರ ಮನವಿ ಮಾಡಿದೆ.
ಇಡೀ ದೇಶದಲ್ಲಿ ಯಾವ ರಾಜ್ಯಕ್ಕೂ ತನ್ನದೇ ಆದ ಧ್ವಜ ಇಲ್ಲ, ಗೀತೆ ಇಲ್ಲ ಆದರೆ ಕುವೆಂಪು ರಚಿಸಿರುವ ಗೀತೆ ನಮ್ಮ ನಾಡಗೀತೆಯಾಗಿರುವುದು ವಿಶೇಷ, ನಮ್ಮದೇ ಆದ ಬಾವುಟ ಇದೆ. ಕನ್ನಡ ನಮ್ಮ ತಾಯಿ ಭಾಷೆ, ಮನಸಿನ ಭಾಷೆ. ಕನ್ನಡಕ್ಕೆ ಎರಡು ಸಾವಿರ ವರ್ಷ ಇತಿಹಾಸವಿದೆ. ನಮ್ಮ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.