ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಖಾನತೋಟ ಗಂಗಾಪುರ ಪೇಟೆ ಓಣೆಯಲ್ಲಿ 3ನೇ ವರ್ಷದ ಉಪನಯನ ಕಾರ್ಯಕ್ರಮ ಹಾಗೂ ಮದುವೆ ವಿಜೃಂಭಣೆಯಿಂದ ನೆರವೇರಿತು. ಕ್ರಾಂತಿ ಸೇನಾ ಗದಗ ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಲ, ಶ್ರೀ ಜಗದಂಬಾ ಸೇವಾ ಸಮಿತಿಯ ಉಪನಯನ ಸಮಿತಿ ನೇತೃತ್ವದಲ್ಲಿ 36ಮುಂಜವಿ ಕಾರ್ಯಕ್ರಮ ಹಾಗೂ ಒಂದು ಮದುವೆ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಉಪನಯನ ಸಮಿತಿಯ ಗೌರವಾಧ್ಯಕ್ಷ ಪರಶುರಾಮಸಾ ಎಸ್.ಹಬೀಬ, ಅಧ್ಯಕ್ಷ ಶಂಕರಸಾ ಎಸ್.ಬದಿ, ಕ್ರಾಂತಿ ಸೇನಾ ಗದಗ ಜಿಲ್ಲಾಧ್ಯಕ್ಷ, ಉಪನಯನ ಸಂಸ್ಥಾಪಕರು ಬಾಬು ಬಾಕಳೆ, ಉಪಾಧ್ಯಕ್ಷರಾದ ಗುರುನಾಥಸಾ ಎ.ಬಾಕಳೆ, ನಾರಾಯಣ ಆರ್. ನಿರಂಜನ, ಶ್ರೀದೇವಿ ಸಿ.ಕಬಾಡಿ, ಗೌರವ ಕಾರ್ಯದರ್ಶಿ ಉಮೇಶ ಎನ್.ಹಬೀಬ, ಕಾರ್ಯದರ್ಶಿ ಮಂಜುನಾಥ ಕೆಂದೊಳ್ಳಿ, ಸಹ-ಕಾರ್ಯದರ್ಶಿ ಕಸ್ತೂರಿಬಾಯಿ ಎನ್.ಕಬಾಡಿ, ಅಕ್ಷತಾ ಎನ್.ಪವಾರ, ಖಜಾಂಚಿ ನಾರಾಯಣಸಾ ಡಿ.ಖಟವಟೆ, ಉಪ ಖಜಾಂಚಿ ಶಂಕರಸಾ ಕಲಬುರ್ಗಿ, ಸ್ವಾಗತ ಸಮಿತಿಯ ಗುರು ಕೆ.ಭಾಂಡಗೆ, ಪ್ರವೀಣ ಎ.ಹಬೀಬ ಉಪಸ್ಥಿತರಿದ್ದರು.