ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವರು ನೀಡಿರುವ ಅಗೌರವದ ಹೇಳಿಕೆ ಖಂಡನೀಯ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಸಿಪಿಐಎಂ ಪಕ್ಷದ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಹೇಳಿದ್ದಾರೆ.
Advertisement
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂಬೇಡ್ಕರ್ ಅವರ ಬಗ್ಗೆ ರಾಜ್ಯಸಭೆ ಅಧಿವೇಶನದಲ್ಲಿ ಅಮಿತ್ ಶಾ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದು, ಇದು ಅವರ ಮನುವಾದಿ ದೃಷ್ಟಿಕೋನವನ್ನು ಬಿಂಬಿಸಿದೆ. ಅಮಿತ್ ಶಾ ರಾಜಕಾರಣಿಯಲ್ಲ, ಅವರು ವ್ಯಾಪಾರಿ. ಸಮ ರಾಜಕಾರಣವೂ ಸಹ ಅವರಿಗೆ ಒಂದು ಉದ್ಯಮವಾಗಿದೆ. ಇಂತಹ ವ್ಯಕ್ತಿಯಿಂದ ದೇಶ, ಸಂವಿಧಾನದ ರಕ್ಷಣೆ ಅಸಾಧ್ಯ.
ಕೇಂದ್ರ ಗೃಹ ಸಚಿವರು ಕೂಡಲೇ ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.