ಮುನಿರತ್ನ ಮೇಲೆ ಮೊಟ್ಟೆ ಎಸೆತ ಕೇಸ್:‌ ಬಿಜೆಪಿ ಡ್ರಾಮಾ ಕಂಪನಿ ರೀತಿ ವರ್ತನೆ ಮಾಡುತ್ತಿದೆ – ದಿನೇಶ್ ಗುಂಡೂರಾವ್

0
Spread the love

ಬೆಳಗಾವಿ: ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಡ್ರಾಮಾ ಕಂಪನಿ ರೀತಿ ವರ್ತನೆ ಮಾಡುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುನಿರತ್ನ ತಾವೇ ಹಲ್ಲೆ ಮಾಡಿಸಿಕೊಂಡಿರಬಹುದು, ಬಿಜೆಪಿ ಡ್ರಾಮಾ ಕಂಪನಿ ರೀತಿ ವರ್ತನೆ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇನ್ನೂ ಬಿಜೆಪಿಯವರು ಬಾಯಿಗೆ ಬಂದ ಹಾಗೆ ಆರೋಪ‌ ಮಾಡುತ್ತಿದ್ದಾರೆ. ಸಿ.ಟಿ.ರವಿ, ಮುನಿರತ್ನ ಪ್ರಕರಣದಲ್ಲಿ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಕಪೋಕಲ್ಪಿತ ಮಾತುಗಳನ್ನು ಸೇರಿಸುವುದು ಯಾವ ನ್ಯಾಯ? ಪಾಪ, ಕುಸುಮಾ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದು ಸರಿಯಲ್ಲ. ಉಪ್ಪು ತಿಂದವರು ನೀರು ಕುಡಿಯಬೇಕೆಂಬ ಸ್ಥಿತಿ ಮುನಿರತ್ನಗೆ ಬಂದಿದೆ. ಸುಳ್ಳು, ಕರುಣೆ ಬರುವ ರೀತಿ ಸನ್ನಿವೇಶ ಸೃಷ್ಟಿ ಮಾಡುವ ಕಲಾವಿದರು ಇವರು. ಜನರಿಗೆ ಇದು ಮನೋರಂಜನೆ, ನಿಜಾಂಶ ಜನರಿಗೆ ಗೊತ್ತಿದೆ ಎಂದು ಹೇಳಿದರು.

 

 


Spread the love

LEAVE A REPLY

Please enter your comment!
Please enter your name here