ಬೆಂಗಳೂರು:- ಬಿಜೆಪಿ ಶಾಸಕ ಮುನಿರತ್ನ ಮೇಲಿನ ಮೊಟ್ಟೆ ದಾಳಿ ಪ್ರಕರಣದ ತನಿಖೆ CBIಗೆ ಕೊಡಲಿ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
Advertisement
ಮೊಟ್ಟೆ ದಾಳಿಯಲ್ಲಿ ಡಿಕೆ ಸುರೇಶ್ ಕೈವಾಡ ಇದೆ ಎಂಬ ಮುನಿರತ್ನ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು, ಸಿಬಿಐ ತನಿಖೆ ಆಗಲಿ ತೊಂದರೆ ಇಲ್ಲ. ನಿಮ್ಮ ಯೋಗ್ಯತೆ ಏನಿದೆ ಅಂತ ಲೋಕಾಯುಕ್ತದಲ್ಲಿ ಇದೆ. ಬಿಜೆಪಿಗೆ ನೈತಿಕತೆ ಇದ್ರೆ ಮುನಿರತ್ನಗೆ ಶಿಕ್ಷೆ ಕೊಡಲಿ ಅಂತ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣದ ತನಿಖೆಯನ್ನು ನಂದಿನಿ ಲೇಔಟ್ ಪೊಲೀಸರು ಚುರುಕುಗೊಳಿಸಿದ್ದಾರೆ.
ಇವತ್ತು ಶಾಸಕ ಮುನಿರತ್ನ ಸಮ್ಮುಖದಲ್ಲಿ ಸ್ಥಳ ಮಹಜರು ನಡೆದಿದೆ. ಈ ವೇಳೆ ನನ್ನ ಮೇಲೆ ಆಸಿಡ್ ದಾಳಿ ಎಂದು ಮುನಿರತ್ನ ವಿವರಿಸಿದ್ದಾರೆ. ಮುನಿರತ್ನ ಹೇಳಿಕೆಯನ್ನು ಪೊಲೀಸರು ವಿಡಿಯೋ ಮೂಲಕ ದಾಖಲಿಸಿದ್ದಾರೆ.