ಚರಗ ಚೆಲ್ಲಿ ಸಂಭ್ರಮಿಸಿದ ರೈತ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ರೈತರಾದ ದೇವಪ್ಪ ರಂಗಪ್ಪ ಕಾಶಪ್ಪನವರ ಇವರ ಹೊಲದಲ್ಲಿ ಸಂಭ್ರಮದಿA ಎಳ್ಳು ಅಮಾವಾಸ್ಯೆಯನ್ನು ಭೂ ತಾಯಿಗೆ ಚರಗ ಚೆಲ್ಲುವ ಮೂಲಕ ಆಚರಿಸಿದರು.

Advertisement

ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆಯಲ್ಲಿ ಭೂತಾಯಿಗೆ ಸೀಮಂತ ಕಾರ್ಯ ಮಾಡಿ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿಸುತ್ತಾರೆ. ಈ ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ. ವರ್ಷಾನುಗಟ್ಟಲೇ ಸಮಸ್ಯೆಗಳ ಸರಮಾಲೆಯಲ್ಲಿ ಬಳಲಿದ ರೈತರು ಈ ಹಬ್ಬದ ದಿನ ಅದನ್ನು ಮರೆತು ಸಂತಸದ ಕ್ಷಣಗಳನ್ನು ಅನುಭವಿಸಿದರು. ರೈತರನ್ನು ಸದಾ ಕಾಪಾಡುವ ಭೂ ತಾಯಿಗೆ ನಮಿಸಿ ಪುನೀತರಾದರು.


Spread the love

LEAVE A REPLY

Please enter your comment!
Please enter your name here