ಬೆಂಗಳೂರು: ನಕ್ಸಲರು ರಾಷ್ಟ್ರ ಹಿತಕ್ಕಾಗಿ, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಕೆಲಸ ಮಾಡಿದವರಲ್ಲ ಎಂದು ಎಂಎಲ್ಸಿ ಸಿ ಟಿ ರವಿ ಹೇಳಿದ್ದಾರೆ. ಆರು ಮಂದಿ ನಕ್ಸಲರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾಗಿದ್ದಾರೆ. ಈ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು,
ನಕ್ಸಲ್ ಸಿದ್ಧಾಂತ ಪ್ರಜಾಪ್ರಭುತ್ವ ವಿರೋಧಿ, ರಾಷ್ಟ್ರ ವಿರೋಧಿ, ಸಂವಿಧಾನ ವಿರೋಧಿ ಸಿದ್ಧಾಂತವಾಗಿದೆ. ಅವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇಲ್ಲ, ಬುಲೆಟ್ ಮೇಲೆ ನಂಬಿಕೆ ಜಾಸ್ತಿ ಎಂದು ಟೀಕೆ ಮಾಡಿದ್ದಾರೆ. ಇನ್ನೂ ಈ ಶರಣಾಗತಿ ಯಾವ ಕಾರಣಕ್ಕೆ? ನಕ್ಸಲ್ ಶರಣಾಗತಿ ಸಂದರ್ಭದ ದುರುಪಯೋಗ ಆಗ್ತಿದೆಯಾ? ಈ ನಕ್ಸಲರ ಕುರಿತು ಪೂರ್ಣ ತನಿಖೆ ನಡೆಯಬೇಕು.
ನಿಜವಾಗಿ ಶರಣಾಗಿದ್ರೆ ಸಮಸ್ಯೆ ಇಲ್ಲ, ಆದ್ರೆ ಸಂದರ್ಭದ ದುರುಪಯೋಗ ಆಗುವುದು ಬೇಡ. ಇದರ ಬಗ್ಗೆ ಸಮಗ್ರ ತನಿಖೆ ನಡೆಯಲಿ… ಈ ನಕ್ಸಲರು ರಾಷ್ಟ್ರ ಹಿತಕ್ಕಾಗಿ, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಕೆಲಸ ಮಾಡಿದವರಲ್ಲ. ಇವರನ್ನು ಸಂಪೂರ್ಣವಾಗಿ ತನಿಖೆ ನಡೆಸಬೇಕು ಎಂದು ಸಿಟಿ ರವಿ ಆಗ್ರಹಿಸಿದ್ದಾರೆ.