ಹಳೆಯ ಪತ್ರಿಕೆಗಳ 8ನೇ ಪ್ರದರ್ಶನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ಬೆಳಧಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.26ರಂದು ಬೆಳಿಗ್ಗೆ 8 ಗಂಟೆಗೆ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗದುಗಿನ ಚಿತ್ರಕಲಾವಿದ ಶಂಕರಗೌಡ ಪಾಟೀಲ ಸಂಗ್ರಹಿಸಿರುವ, ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಭಾರತ ಸ್ವಾತಂತ್ರ್ಯ ಹೋರಾಟದ ನೆನಪುಗಳ ಹಳೆಯ ಪತ್ರಿಕೆಗಳ 8ನೇ ಪ್ರದರ್ಶನ ಜರುಗಲಿದೆ.

Advertisement

ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಧ್ವಜಾರೋಹಣವನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಈರಣ್ಣ ಮ.ಕಲ್ಮಠ ವಹಿಸುವರು. ಪ್ರದರ್ಶನದ ಉದ್ಘಾಟನೆಯನ್ನು ಬೆಳಧಡಿ ಗ್ರಾ.ಪಂ ಅಧ್ಯಕ್ಷ ಶಂಕ್ರಪ್ಪ ಹೊಸಮನಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಲಕ್ಷ್ಮವ್ವ ಮುಂದಲಮನಿ, ಪಾರ್ವತಿ ಗುಡಿಮನಿ, ಶಾರದಾ ಇನಾಮತಿ, ಬಸವರಾಜ ಪೂಜಾರಿ, ಬಸವರಾಜ ಕುರ್ತಕೋಟಿ, ಚಂದ್ರಕಲಾ ಇಟಗಿಮಠ, ಶಂಭುಲಿಂಗಯ್ಯ ಕಲ್ಮಠ ಪಾಲ್ಗೊಳ್ಳುವರು.

ಮುಖ್ಯ ಶಿಕ್ಷಕರಾದ ಭೋಜರಾಜ ಹಡಪದ, ಸಂಜೀವಸ್ವಾಮಿ ಎಂ.ಬಿ. ಅಬ್ಬಿಗೇರಿ, ಶಾಲೆಯ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗ ಹಾಗೂ ಎಸ್.ಡಿ.ಎಮ್.ಸಿ. ಸರ್ವ ಸದಸ್ಯರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here