ತಂದೆ-ತಾಯಿ, ಗುರುಗಳನ್ನು ಗೌರವಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಹೆತ್ತ ತಂದೆ-ತಾಯಿ, ಕಲಿಸಿದ ಗುರುಗಳು ಹಾಗೂ ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು ಎಂದು ಉಲ್ಲಾಸ ಕುರಂದವಾಡ ಹೇಳಿದರು.

Advertisement

ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ 1987-88ನೇ ಸಾಲಿನ 7ನೇ ತರಗತಿಯ ಹಳೆಯ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ, ಗುರುಗಳಿಗೆ ಸನ್ಮಾನಿಸಿ ಮಾತನಾಡಿ, ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಂದೆಂದಿಗೂ ಮುಂದಿದ್ದು, ಮಕ್ಕಳು ಸಾಕಿ ಸಲುಹಿದ ತಂದೆ-ತಾಯಿಗಳನ್ನು, ಕಲಿಸಿದ ಗುರುಗಳನ್ನು ಹಾಗೂ ಕಲಿತ ಶಾಲೆಗಳನ್ನು ನಿತ್ಯ ಗೌರವಿಸಬೇಕು. ಅಂದಾಗ ನಮ್ಮ ಬದುಕು ಹಸನಾಗುತ್ತದೆ ಎಂದರು.

ಸದಾನಂದ ಚವಡಿ, ಸಂತೋಷ ದೇಶಪಾಂಡೆ, ರಾಜೇಶ ಸುಬ್ಬಣ್ಣವರ. ಮಲ್ಲಿಕಾರ್ಜುನ ಗುದ್ದಿನ, ಜಾಫರ್ ರೊಕ್ಕದಕಟ್ಟಿ, ಪ್ರದೀಪ ಹರಪನಹಳ್ಳಿ, ಮಂಜುನಾಥ ಗದಗ. ಜಯದೇವ ಹಿರೇಮಠ, ರವಿ ದೀಕ್ಷಿತ, ಮಾಹಾದೇವಪ್ಪಾ ಕಣವಿ, ಶರತ್ ಸೋನಗೋಜಿ, ಬಸವರಾಜ ನೇರ್ತಿ, ಮಾಹಾಂತೇಶ ಪಲ್ಲೇದ, ಹಜರೇಸಾಬ ಕಲಕುಟ್ರ, ಜಗದೀಶ ಬಟ್ಟೂರ, ಇಸ್ಮಾಯಿಲ ಮುಜಾವಾರ, ಶಾಲಾ ಪ್ರಧಾನಗುರು ಪಿ.ಬಿ. ಕೆಂಚನಗೌಡರ, ವಿ.ಡಿ. ಸಿದ್ದನಗೌಡರ, ಎಂ.ಎಂ. ಮೇಗಲಮನಿ, ಕೆ.ಎಂ. ಹೆರಕಲ್ ಇದ್ದರು.


Spread the love

LEAVE A REPLY

Please enter your comment!
Please enter your name here