HomeGadag Newsಸೌಹಾರ್ದಯುತ ಬದುಕಿಗೆ ವಚನಗಳು ಅತ್ಯಗತ್ಯ

ಸೌಹಾರ್ದಯುತ ಬದುಕಿಗೆ ವಚನಗಳು ಅತ್ಯಗತ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶರಣರ ವಚನಗಳು ಮಾನವೀಯ ಮೌಲ್ಯಗಳಿಂದ ಕೂಡಿದ್ದು, ಪ್ರಸ್ತುತ ದಿನಮಾನಕ್ಕೆ ದಾರೀದಿಪವಾಗಿದೆ. ಬಸವಾದಿ ಶಿವಶರಣರ ಬದುಕು ಮತ್ತು ವಚನಗಳು ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣನ್ನುಂಟು ಮಾಡುತ್ತವೆ. ಶಾಂತಿ, ಸೌಹಾರ್ದಯುತ ಬದುಕಿಗೆ ಶರಣರ ಆದರ್ಶಗಳು, ವಚನಗಳು ಬಹಳಷ್ಟು ಅವಶ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2731ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪ್ರತಿಯೊಂದು ವಚನದ ಸಾಲಿನಲ್ಲಿ, ಶಬ್ದದಲ್ಲಿಯೂ ಮೌಲ್ಯಯುತ ಸಂದೇಶವನ್ನು ಕಾಣಬಹುದು. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ‘ನಡೆದಂತೆ ನುಡಿ. ನುಡಿದಂತೆ ನಡೆ’ ಇದು ಜೀವನದ ಮೌಲ್ಯವಾಗಬೇಕು ಎಂದು ವಚನಗಳ ಮೂಲಕ ತಿಳಿಸಿದರು.

‘ಮಾಣಿಕ್ಯದ ದೀಪ್ತಿಯಂತಿರಬೇಕು’ ದೀಪ್ತಿ ಅದ್ಭುತವಾದ ಬೆಳಕು. ನಮ್ಮ ನುಡಿಗಳು ಪಾರದರ್ಶಕವಾಗಿರಬೇಕು. ಮಾತು ಮತ್ತು ಕೃತಿಗಳು ಒಂದಾಗಿರಬೇಕು. ಹೇಳುವುದೊಂದು ಬರೆಯುವದೊಂದು ಆಗಬಾರದು. ಶರಣರು ಹೇಳಿದಂತೆ ನಡೆದರು. ಬದುಕಿಗೆ ಮೌಲ್ಯಗಳನ್ನು ಬಿತ್ತಿದರು. ಜಾತಿ, ಮತ, ಪಂಥ, ಸ್ತ್ರಿಪುರುಷ ತಾರತಮ್ಯ ಬಿಟ್ಟು ಸಮಾನತೆಯಿಂದ ಎಲ್ಲರೂ ಬದುಕಬೇಕು ಎಂದು ಶ್ರೀಗಳು ನುಡಿದರು.

ಪಿ.ಪಿ.ಜಿ. ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಸುಮಿತ್ರಾ ಕಾಡದೇವರಮಠ ಸಂಗೀತ ಸೇವೆಯನ್ನು ನೀಡಿದರು. ಮೃತೃಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ನೆಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಭೂಮಿಕಾ ಕೆ.ತುಕ್ಕಪ್ಪನವರ ಮಾಡಿದರೆ, ವಚನ ಚಿಂತನೆಯನ್ನು ಬಸವರಾಜ ಕೆ.ತುಕ್ಕಪ್ಪನವರ ನಡೆಸಿದರು. ದಾಸೋಹ ಸೇವೆಯನ್ನು ವಿಜಯಪುರದ ಇಂದ್ರಾಬಾಯಿ ಪಾಟೀಲ ಹಾಗೂ ಕುಟುಂಬ ವರ್ಗದವರು ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಸಂಘಟನಾ ಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಸಹ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಸಹ ಚೇರಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತ ಕೋರಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

 

**ಬಾಕ್ಸ್**

ಉಪಾನ್ಯಾಕರಾಗಿ ಆಗಮಿಸಿದ್ದ ಶಿರಹಟ್ಟಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಕೆ. ಲಮಾಣಿ ಮಾತನಾಡಿ, ವಚನಗಳಲ್ಲಿ ಅತ್ಯಮೂಲ್ಯವಾದ ಜೀವನದ ಆದರ್ಶಗಳನ್ನು ಕಾಣುತ್ತೇವೆ. ಮೋಸ, ವಂಚನೆಗಳಿಂದ ದೂರಾದ ಬದುಕೇ ನಿಜವಾದ ಮೌಲ್ಯ. ಶರಣರ ಬದುಕಿನಲ್ಲಿ, ವಚನಗಳಲ್ಲಿ ಆದರ್ಶಗಳು ಹೂವುಗಳು ಅರಳಿವೆ. ಸಿಹಿಯಾದ ಹಣ್ಣುಗಳೇ ಬಿಟ್ಟಿವೆ. ವಚನಗಳನ್ನು ಓದಿದಾಗ, ಹೂವುಗಳ ಸುವಾಸನೆ, ಹಣ್ಣುಗಳ ಸಿಹಿ ಸಹಜವಾಗಿ ಲಭಿಸುತ್ತವೆ. ಅವರ ವಚನಗಳ ಸಾರವೇ ಜಗಕೆ ದಾರಿದೀಪ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!