ವಿಜಯಸಾಕ್ಷಿ ಸುದ್ದಿ, ಗದಗ
ಐಪಿಎಲ್ ಸುರುವಾಗಿದ್ದೇ ತಡ ಐಪಿಎಲ್ ತಂಡಗಳ ಸೋಲು ಗೆಲುವಿನ ಕುರಿತು ಜಿಲ್ಲೆಯಲ್ಲಿ ಬೆಟ್ಟಿಂಗ್ ಜೋರಾಗಿದೆ. ಅದರಲ್ಲೂ ಗದಗ ನಗರದಲ್ಲಿ ಹೇಳೂರು ಕೇಳೋರು ಇಲ್ಲದಂತೆ ಆಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.
ನಿನ್ನೆ ನಗರದ ಖಾನತೋಟದ ಅಂಗಡಿಯೊಂದರ ಮುಂದೆ ಎಸ್ ಆರ್ ಎಚ್ ಹಾಗೂ ಮುಂಬೈ ಇಂಡಿಯನ್ಸ್ ಮದ್ಯ ನಡೆದ ಕ್ರಿಕೆಟ್ ಪಂದ್ಯದ ಮೊದಲೇ ಅದರ ಸ್ಕೋರು ಹಾಗೂ ಫಲಿತಾಂಶದ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿದ್ದವರ ಮೇಲೆ ನಗರ ಠಾಣೆಯ ಪಿಎಸ್ಐ ಪ್ರಕಾಶ್ ಡಿ ಹಾಗೂ ಸಿಬ್ಬಂದಿ ದಾಳಿ ಬಂಧಿಸಿದ್ದಾರೆ. ಬಂಧಿತರನ್ನು ವ್ಯಾಪಾರಸ್ಥರಾದ ಸುದರ್ಶನ ಶಂಕರ ಗಾಂಜಿ, ವಿನಾಯಕ ಬಾಸ್ಕರಸಾ ಹಬೀಬ, ಕಿರಣ ರವಿ ಬದಿ, ಮನೋಜ್ ಮಂಜುನಾಥ್ ಕಬಾಡಿ, ಪುನೀತ್ ಚಂದುಲಾಲ್ ಭಾಂಡಗೆ ಎನ್ನಲಾಗಿದೆ.
ಬಂಧಿತರಿಂದ ಕೇವಲ 520 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.