ಗದಗ: ಗೃಹ ಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗದ ಕುರಿತು ಸಂಸದ ಜಗದೀಶ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿರುಗೇಟು ನೀಡಿದ್ದಾರೆ.
ಗದಗನಲ್ಲಿ ಮಾತನಾಡಿದ ಅವರು, ಯಾರಾದ್ರೂ ಏನಾದ್ರೂ ಅಂದ್ರೆ ಸುಮ್ಮನಿರಬಹುದು. ಆದರೆ ಬರಗಾಲ ಬಿದ್ದು ನಾವು ಸುಪ್ರೀಂಕೋರ್ಟ್ ಗೆ ಹೋದಾಗಲೂ ಸಹಿತ ಪರಿಹಾರ ನೀಡದೇ ಇರೋರು ನೀವು. ಎರಡು ತಿಂಗಳ ತಡ ಆಗಿದ್ದಕ್ಕೆ ಸರ್ಕಾಕ್ಕೆ ನೀವೇನು ಹಂಗಾತು ಹಿಂಗಾತು ಅನ್ನೋದಕ್ಕೆ ನೈತಿಕ ಹಕ್ಕಿದೆ.
ಕರ್ನಾಟಕದ ಜನರ ಬಗ್ಗೆ ನಿಮಗೆ ಕಾಳಜಿ ಇದ್ರೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಯ್ತಲ್ಲ. ಯುಪಿ, ಬಿಹಾರಕ್ಕೆ ಎಷ್ಟು ಬರುತ್ತೆ. ಅದಕ್ಕೆ ದ್ವನಿ ಎತ್ತಿ, ಯಾಕೆ ಧ್ವನಿ ಎತ್ತಲು ಆಗ್ತಾ ಇಲ್ಲ..? ನೀವು ಕರ್ನಾಟಕದ ಹಿತ ಕಾಪಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಗ್ಯಾರಂಟಿ ಯೋಜನೆ ವಿಳಂಭವಾಗಿದ್ರೆ ಸರಿ ಮಾಡುತ್ತೇವೆ. ಟೆಕ್ನಿಕಲ್ ಕಾರಣದಿಂದ ವಿಳಂಭವಾಗಿರಬಹುದು. ಹೇಗೆ ಸಂಬಳ 1 ನೇ ತಾರೀಖು ಬರುತ್ತದೋ ಹಾಗೇ ರೆಗ್ಯುಲರ್ ಆಗಿ ಬರುವಂತೆ ಮಾಡ್ತೇವೆ ಎಂದು ಶೆಟ್ಟರ್ಗೆ ತಿರುಗೇಟು ನೀಡಿದ್ದಾರೆ.