ಮಹಾ ಶಿವರಾತ್ರಿ ಹಿಂದೂಗಳಲ್ಲಿ ಮಹತ್ವದ ಹಬ್ಬವಾಗಿದೆ. ಇದನ್ನು ಪ್ರಮುಖವಾಗಿ ಶಿವನನ್ನು ಗೌರವಿಸಲು ಪ್ರತಿ ವರ್ಷ ಆಚರಿಸಲಾಗುತ್ತದೆ. ಮಹಾ ಶಿವರಾತ್ರಿ ಹಬ್ಬವು ಚಳಿಗಾಲದ ಕೊನೆಯಲ್ಲಿ ಬರುತ್ತದೆ, ಇದು ಬೇಸಿಗೆ ಪ್ರಾರಂಭವಾಗುವ ಮೊದಲು ಅಂದರೆ, ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಬರುತ್ತದೆ.
ಈ ವರ್ಷ ಫೆಬ್ರವರಿ 26 (ಇಂದು) ಉತ್ಸವ ನಡೆಯಲಿದೆ. ಈ ದಿನದಂದು ಶಿವನನ್ನು ಪೂಜಿಸುವ ಮತ್ತು ಶಿವಲಿಂಗದ ಜಲ ಅಭಿಷೇಕವನ್ನು ಸಂಪೂರ್ಣ ಆಚರಣೆಗಳೊಂದಿಗೆ ಮಾಡುವುದರಿಂದ ಬಹಳಷ್ಟು ಲಾಭಗಳು ಸಿಗುತ್ತದೆ. ಇದಲ್ಲದೆ ಶಿವನ ಆಶೀರ್ವಾದ ಪಡೆಯಲು ಭಕ್ತರು ಈ ದಿನದಂದು ವಿಶೇಷ ವಸ್ತುಗಳನ್ನ ದಾನ ಮಾಡುತ್ತಾರೆ.
ತುಪ್ಪ: ಈ ಮಹಾ ಶಿವರಾತ್ರಿಯಂದು ಶಿವಲಿಂಗಕ್ಕೆ ತುಪ್ಪವನ್ನು ಅರ್ಪಿಸಿದರೆ ಬಹಳ ಒಳ್ಖೆಯದು ಎನ್ನಲಾಗುತ್ತದೆ. ಅಲ್ಲದೇ, ಈ ಮಹಾಶಿವರಾತ್ರಿಯಂದು ತುಪ್ಪವನ್ನ ದಾನ ಮಾಡಿದರೆ ಮನೆಯಲ್ಲಿನ ಎಲ್ಲಾ ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಮತ್ತು ನಕಾರಾತ್ಮಕತ ಶಕ್ತಿಗಳು ಸಹ ದೂರವಾಗುತ್ತದೆ ಎನ್ನುವ ನಂಬಿಕೆ ಇದೆ. ನಿಮ್ಮ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಬರಬೇಕು ಎಂದರೆ ತಪ್ಪದೇ ತುಪ್ಪವನ್ನ ದಾನ ಮಾಡಿ.
ಎಳ್ಳು: ನೀವು ಮಹಾಶಿವರಾತ್ರಿಯಂದು ಎಳ್ಳನ್ನು ದಾನ ಮಾಡಬೇಕು ಮತ್ತು ಅದರ ಜೊತೆಗೆ ಶಿವಲಿಂಗದ ಮೇಲೆ ಅರ್ಪಿಸಬೇಕು ಏಕೆಂದರೆ ಇದು ಪಿತೃ ದೋಷವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಜಾತಕದಲ್ಲಿ ಬೇರೆ ಯಾವುದಾದರೂ ಗ್ರಹ ದೋಷ ಇದ್ದರೆ ಅದಕ್ಕೆ ಸಹ ಈ ಕಪ್ಪು ಎಳ್ಳು ಪರಿಹಾರ ನೀಡುತ್ತದೆ. ನೀವು ಗ್ರಹಗಳ ದುಷ್ಟ ಪರಿಣಾಮವನ್ನ ಕಡಿಮೆ ಮಾಡಲು ಕಪ್ಪು ಎಳ್ಳನ್ನ ದಾನ ಮಾಡಬಹುದು. ಅಲ್ಲದೇ, ಇದರಿಂದ ನಿಮ್ಮ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ.
ಬಟ್ಟೆ: ಸಾಲ ಮತ್ತು ಇತರ ಆರ್ಥಿಕ ತೊಂದರೆಗಳು ಎಲ್ಲರನ್ನೂ ಕಾಡುತ್ತದೆ. ಆದರೆ ಅದಕ್ಕೆ ಪರಿಹಾರ ಶಿವರಾತ್ರಿಯಂದು ಪಡೆಯಬಹುದು. ನೀವು ಈ ದಿನ ಬಟ್ಟೆಯನ್ನ ದಾನ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಜಾತಕದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಮಹಾಶಿವರಾತ್ರಿಯಂದು ವಸ್ತ್ರಗಳನ್ನು ದಾನ ಮಾಡಲು ಸಲಹೆ ನೀಡಲಾಗುತ್ತದೆ. ಹೀಗೆ ಮಾಡಿದರೆ ಶಿವನ ಕೃಪೆಯಿಂದ ನಿಮಗೆ ಆರ್ಥಿಕ ಪ್ರಗತಿ ಸಿಗುತ್ತದೆ.
ದೇಣಿಗೆ: ಹಬ್ಬದ ದಿನ ನೀವು ಹಣವನ್ನ ದಾನ ಮಾಡುವುದರಿಂದ ಬಹಳಷ್ಟು ಲಾಭಗಳನ್ನ ಪಡೆಯಬಹುದು. ಶಿವರಾತ್ರಿಯಮದು ಬಡವರಿಗೆ ಹಾಗೂ ಕಷ್ಟದಲ್ಲಿ ಇರುವವರಿಗೆ ನೀವು ನಿಮ್ಮ ಕೈಲಾದಷ್ಟು ಹಣವನ್ನ ದಾನ ಮಾಡುವುದರಿಂದ ಅಥವಾ ಯಾರಿಗಾದರೂ ಬೇರೆ ರೀತಿ ಸಹಾಯ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು. ಈ ರೀತಿ ದಾನ ಮಾಡುವುದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ.