ಕಲಾವಿದರು ಕಾಂಗ್ರೆಸ್ ಜೀತದಾಳುಗಳಲ್ಲ: ಡಿಕೆಶಿಗೆ CT ರವಿ ತಿರುಗೇಟು!

0
Spread the love

ಬೆಂಗಳೂರು:- ಕಲಾವಿದರಿಗೆ ಡಿಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್ ಕೊಟ್ಟ ವಿಚಾರವಾಗಿ ಪರಿಷತ್ ಸದಸ್ಯ CT ರವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Advertisement

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಕೆಶಿ ನಟ್ಟು ಬೋಲ್ಟ್ ಟೈಟ್ ಮಾಡುತ್ತೇವೆ ಎಂದು ಎಲ್ಲೋ ಒಂದು ಕಡೆ ಲೂಸ್ ಲೂಸಾಗಿ ಮಾತನಾಡಿರಬಹುದು. ಬೆದರಿಕೆ ಹಾಕುವುದು ಗೌರವ ಸಂಗತಿಯೇ? ಕಲಾವಿದರು ಕಾಂಗ್ರೆಸ್ ಜೀತದಾಳುಗಳಲ್ಲ ಎಂದು ಹೇಳಿದರು.

ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಮೊಯ್ಲಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಪಕ್ಷ ನಿರ್ಣಯ ಮಾಡಿ ಮುಖ್ಯಮಂತ್ರಿ ಎಂದು ಒಪ್ಪಿದರೆ ಸಿಎಂ ಆಗ್ತಾರೆ. ಹೀಗೆ ಹೇಳುವುದರ ಮೂಲಕ ನಾನೇ ಮುಖ್ಯಮಂತ್ರಿ ಎಂದು, ಸಿಎಂ ಅವರನ್ನ ಇಳಿಸುತ್ತೇವೆ ಅಂತ ಯಾಕೆ ಅಪಮಾನ ಮಾಡ್ತೀರಾ? ಇಳಿಸುವುದಾದರೆ ಒಂದೇ ದಿನ ಇಳಿಸಿ. ಅವರನ್ನು ಕೂರಿಸಿ, ಯಾಕೆ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡ್ತೀರಾ? ಬಜೆಟ್ ಮಂಡಿಸುವ ವೇಳೆ ಈ ರೀತಿ ಆದರೆ ಅಪಮಾನ ಎಂದು ವ್ಯಂಗ್ಯವಾಡಿದರು.


Spread the love

LEAVE A REPLY

Please enter your comment!
Please enter your name here