ಸರ್ಕಾರ ಮುಸಲ್ಮಾನರಿಗೆ ಮೀಸಲಾತಿಯನ್ನು ಘೋಷಿಸಿದ್ರೆ ಅದು ಸಂವಿಧಾನ ವಿರೋಧಿ ಅನಿಸಿಕೊಳ್ಳಲಿದೆ: ಯತ್ನಾಳ್

0
Spread the love

ಬೆಂಗಳೂರು: ಸರ್ಕಾರ ಮುಸಲ್ಮಾನರಿಗೆ ಮೀಸಲಾತಿಯನ್ನು ಘೋಷಿಸಿದರೆ ಅದು ಸಂವಿಧಾನ ವಿರೋಧಿ ಅನಿಸಿಕೊಳ್ಳಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಮುಸಲ್ಮಾನರಿಗೆ ಮೀಸಲಾತಿಯನ್ನು ಘೋಷಿಸಿದರೆ ಅದು ಸಂವಿಧಾನ ವಿರೋಧಿ ಅನಿಸಿಕೊಳ್ಳಲಿದೆ,

Advertisement

ಯಾಕೆಂದರೆ, ಧರ್ಮಾಧರಿತ ಮೀಸಲಾತಿಯನ್ನು ನೀಡಲು ಬರೋದಿಲ್ಲ, ಸರ್ವೋಚ್ಛ ನ್ಯಾಯಾಲಯದಲ್ಲಿ ಇದರ ಬಗ್ಗೆ ವಾದವಿವಾದ ನಡೆದಿದೆ, ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿ ಸಲ್ಲದು ಎಂಬ ತೀರ್ಪು ನ್ಯಾಯಾಲಯ ನೀಡುವ ಭರವಸೆ ತಮಗಿದೆ ಎಂದು ಹೇಳಿದರು.

ಇನ್ನೂ ವೀರಶೈವ ಲಿಂಗಾಯತರಿಗೆ 2 ಎ ಮೀಸಲಾತಿ ತಪ್ಪಿಸಿದ್ದೇ ಯಡಿಯೂರಪ್ಪ ಮತ್ತು ವಿಜಯೇಂದ್ರ, ಅವರ ನಾಯಕತ್ವವನ್ನು ವೀರಶೈವ ಲಿಂಗಾಯತ ಸಮುದಾಯ ಒಪ್ಪುವುದು ಸಾಧ್ಯವೇ ಇಲ್ಲ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here