4 ಕರುಗಳನ್ನು ಕೊಂದಿದ್ದ ಚಿರತೆ ಕೊನೆಗೂ ಬೋನಿಗೆ ಲಾಕ್!

0
Spread the love

ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿಯಲ್ಲಿ ಒಂದೇ ದಿನ 4 ಕರುಗಳನ್ನು ಕೊಂದಿದ್ದ ಚಿರತೆಯು ಬೋನಿಗೆ ಬಿದ್ದಿದೆ. ಈ ಹಿನ್ನೆಲೆ ಜನತೆ ನಿರಾಳರಾಗಿದ್ದಾರೆ.

Advertisement

ಗ್ರಾಮದ ನಾಗಪ್ಪ ಎಂಬವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನ್ ಇರಿಸಲಾಗಿತ್ತು. ಕೊಟ್ಟಿಗೆ ಮಾದರಿ ಬೋನಿಗೆ ಐನಾತಿ ಚಿರತೆ ಸೆರೆ ಸಿಕ್ಕಿದೆ. ಕಳೆದ 15 ದಿನಗಳ ಹಿಂದೆಯಷ್ಟೇ ನಾಗಪ್ಪ ಎಂಬವರಿಗೆ ಸೇರಿದ 4 ಕರುಗಳನ್ನು ಚಿರತೆ ಕೊಂದಿತ್ತು. ಬಂಡೀಪುರದ ಮದ್ದೂರು ವಲಯ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಬೋನಿರಿಸಿದ್ದರು.

ಇಂದು ಚಿರತೆ ಬೋನಿಗೆ ಬಿದ್ದ ಹಿನ್ನೆಲೆ ಜನತೆ ನಿರಾಳರಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here