ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿಯಲ್ಲಿ ಒಂದೇ ದಿನ 4 ಕರುಗಳನ್ನು ಕೊಂದಿದ್ದ ಚಿರತೆಯು ಬೋನಿಗೆ ಬಿದ್ದಿದೆ. ಈ ಹಿನ್ನೆಲೆ ಜನತೆ ನಿರಾಳರಾಗಿದ್ದಾರೆ.
Advertisement
ಗ್ರಾಮದ ನಾಗಪ್ಪ ಎಂಬವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನ್ ಇರಿಸಲಾಗಿತ್ತು. ಕೊಟ್ಟಿಗೆ ಮಾದರಿ ಬೋನಿಗೆ ಐನಾತಿ ಚಿರತೆ ಸೆರೆ ಸಿಕ್ಕಿದೆ. ಕಳೆದ 15 ದಿನಗಳ ಹಿಂದೆಯಷ್ಟೇ ನಾಗಪ್ಪ ಎಂಬವರಿಗೆ ಸೇರಿದ 4 ಕರುಗಳನ್ನು ಚಿರತೆ ಕೊಂದಿತ್ತು. ಬಂಡೀಪುರದ ಮದ್ದೂರು ವಲಯ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಬೋನಿರಿಸಿದ್ದರು.
ಇಂದು ಚಿರತೆ ಬೋನಿಗೆ ಬಿದ್ದ ಹಿನ್ನೆಲೆ ಜನತೆ ನಿರಾಳರಾಗಿದ್ದಾರೆ.